ADVERTISEMENT

ಬಂಡೀಪುರ: ತಪ್ಪಿಸಿಕೊಂಡಿದ್ದ ಸಾಕಾನೆ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 20:50 IST
Last Updated 27 ಜುಲೈ 2020, 20:50 IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಸಾಕಾನೆ ಶಿಬಿರದ ಗಂಡಾನೆಯೊಂದು ಮೂರು ದಿನಗಳ ಹಿಂದೆ ತಪ್ಪಿಸಿಕೊಂಡಿದ್ದು, ನಾಗರಹೊಳೆಯಲ್ಲಿ ಸೋಮವಾರ ಪತ್ತೆಯಾಗಿದೆ.

‘ಶಿಬಿರದಲ್ಲಿದ್ದ ಭಾಸ್ಕರ ಎಂಬ ಆನೆ ಮೂರು ದಿನಗಳ ಹಿಂದೆ ಕಾಡಾನೆಗಳೊಂದಿಗೆ ಹೋಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದ್ದೆವು. ನಾಗರಹೊಳೆಯಲ್ಲಿ ಪತ್ತೆಯಾಗಿದ್ದು, ಹಿಡಿಯಲಾಗಿದೆ. ಸದ್ಯ, ನಾಗರಹೊಳೆಯ ಅಂತರ ಸಂತೆಯಲ್ಲಿದ್ದು, ಮಂಗಳವಾರ ಶಿಬಿರಕ್ಕೆ ಕರೆತರಲಾಗುವುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT