ADVERTISEMENT

ದೊಣ್ಣೆ ವರಸೆಗೆ ಬದುಕು ಮೀಸಲಿಟ್ಟ 'ಪುಟ್ಟಯ್ಯ'

ನಾ.ಮಂಜುನಾಥ ಸ್ವಾಮಿ
Published 12 ಏಪ್ರಿಲ್ 2022, 20:30 IST
Last Updated 12 ಏಪ್ರಿಲ್ 2022, 20:30 IST
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ಗರಡಿಮನೆಯ ಮುಂಭಾಗ ದೊಣ್ಣೆ ವರಸೆಕಲಿಕೆಯಲ್ಲಿ ತಲ್ಲೀನರಾಗಿರುವ ಯುವಕರು
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ಗರಡಿಮನೆಯ ಮುಂಭಾಗ ದೊಣ್ಣೆ ವರಸೆಕಲಿಕೆಯಲ್ಲಿ ತಲ್ಲೀನರಾಗಿರುವ ಯುವಕರು   

ಯಳಂದೂರು:ಗ್ರಾಮೀಣ ಕಲೆಗಳಲ್ಲಿ ಇನ್ನೂ ಉಸಿರಾಡುತ್ತಿರುವ ಕಲೆ ‘ದೊಣ್ಣೆ ವರಸೆ’. ಈ ಜನಪದ ಕಲೆಹಬ್ಬ, ಉತ್ಸವಗಳಲ್ಲಿ ಮಿಂಚಿ ಮಾಯವಾಗುತ್ತಿದೆ. ದಸರಾ, ರಂಗೋತ್ಸವ ಇಲ್ಲವೇಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಲೂದೊಣ್ಣೆ ವರಸೆಯ ಸಾಂಪ್ರದಾಯಿಕ ನೆಲೆಯನ್ನು ಕಾಣಬಹುದು.

ಯರಿಯೂರು ಗ್ರಾಮದ ಪುಟ್ಟಯ್ಯ ಈ ಕಲೆಯನ್ನು ಪರಿಚಯಿಸಲು ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಬಯಲಾಟ ಹೊರತುಪಡಿಸಿ, ದೊಣ್ಣೆವರಸೆ ಹತ್ತಾರು ಕವಲಾಗಿ ಬೆಳೆದಿದೆ. ಬಹುತೇಕ ಪರಿಶಿಷ್ಟ ಜನಾಂಗದ ಮೂಲ ವರಸೆಯಾಗಿರುವ ಈ ಕಲೆಯ ಉಳಿಕೆ ಮತ್ತು ಕಲಿಕೆಗೆ ಅವರು ಸಮಯ ಇಟ್ಟಿದ್ದಾರೆ. ಹೀಗಾಗಿ, ಗುರುಗಳಮಾರ್ಗದರ್ಶನದಲ್ಲಿ ಎಳೆಯರು ಮತ್ತು ಯುವಕರು ದೊಣ್ಣೆ ವರಸೆ ಕಲಿಯುವ ಕಾಯಕದಲ್ಲಿಆಸಕ್ತರಾಗಿದ್ದಾರೆ.

‘40 ವರ್ಷಗಳಿಂದ ದೊಣ್ಣೆ ವರಸೆ ಕಲಿಸುತ್ತಿದ್ದೇನೆ. ಮದ್ದೂರು, ಕೆಸ್ತೂರು, ಗಣಿಗನೂರು ಗ್ರಾಮಗಳ ದಲಿತರ ಬೀದಿಯಲ್ಲಿ ಈಗಲೂ ನೂರಾರು ಜನರು ದೊಣ್ಣೆ ವರಸೆ ಅಭ್ಯಾಸಮಾಡುತ್ತಿದ್ದಾರೆ. ಚಾವಡಿಗಳ ಮುಂಭಾಗ ಈಗಲೂ ಮುಂಜಾನೆ ಮತ್ತು ಸಂಜೆ ಬೆತ್ತದ ಶಬ್ಧ
ಕೇಳಬಹುದು. 45 ದಿನಗಳಲ್ಲಿ ಕಲೆಯ ಎಲ್ಲ ವರಸೆಗಳು ಸಿದ್ಧಿಸುತ್ತವೆ. ಕೆಲವುವಿದ್ಯಾರ್ಥಿಗಳು ಕಲಿತು ನಾಡಿನ ವಿವಿಧೆಡೆ ಕಾರ್ಯಕ್ರಮ ನೀಡುತ್ತಿದ್ದಾರೆ. ರಂಗಾಯಣಮತ್ತು ಬೀದಿ ನಾಟಕಗಳಲ್ಲೂ ಲಾಟಿ ಕಲೆಯನ್ನು ವೈವಿಧ್ಯಮಯವಾಗಿ ಪ್ರಚುರಪಡಿಸುತ್ತಾರೆ’ ಎಂದು ಪುಟ್ಟಯ್ಯ ಅವರು ಹೇಳಿದರು.

ADVERTISEMENT

ಮರೆಯಾಗಿರುವ ದೊಣ್ಣೆ ವರಸೆ ಅಭ್ಯಾಸ ಈಚೆಗೆ ಬೇಡಿಕೆಪಡೆಯುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲೂ ಇದರ ಬಗ್ಗೆ ಪ್ರಚಾರ ಸಿಗುತ್ತಿದೆ.

‘ನಾಡಿನ ಸಂಸ್ಕೃತಿ ಮತ್ತು ಮನೋಬಲ ಹೆಚ್ಚಿಸುವ ವೇದಿಕೆಯಾಗಿ ಮಕ್ಕಳುಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಏಕಾಗ್ರತೆ ಮತ್ತು ಕುಶಲತೆ ಬಹುಬೇಗಸಿದ್ಧಿಸುತ್ತದೆ. ಹಾಗಾಗಿ, ಪೋಷಕರು ಕನ್ನಡಿಗರ ಕಲೆಯನ್ನು ಮತ್ತೆ ಉನ್ನತ ಮಟ್ಟಕ್ಕೆ
ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಚಿಂತಿಸಬೇಕು’ ಎನ್ನುತ್ತಾರೆ ಮದ್ದೂರು ಯಜಮಾನರು.

‘ಕತ್ತಿವರಸೆ, ಸಾದಾವರಸೆ, ಚಂಡುವರಸೆ, ಬಾಕುವರಸೆ, ವಾರ್ನಾ.. ಮೊದಲಾದ ಶೈಲಿಗಳಿವೆ.ದೇಹದ ಬಾಗು ಬಳುಕಿಗೆ ಅನುಗುಣವಾಗಿ ದೊಣ್ಣೆವರಸೆ ಸಾಗುತ್ತದೆ. ಜಾತ್ರೆ, ಕರಗ, ಮೆರವಣಿಗೆ ಸಂದರ್ಭಗಳಲ್ಲಿ ಗ್ರಾಮೀಣ ಜನರು ಈ ಕಲೆಯಲ್ಲಿ ತಮ್ಮ ಕೈಚಳಕ ತೋರುತ್ತಾರೆ. ಈಕಲೆ ಸಾದರ ಪಡಿಸುವವರಿಗೆ ಆತ್ಮವಿಶ್ವಾಸ ಮತ್ತು ಚತುರತೆ ತಾನೇ ತಾನಾಗಿ ಸಿದ್ಧಿಸುತ್ತದೆ. ಮಕ್ಕಳಿಂದ ವೃದ್ಧರವರೆಗೂ ಕಲಿಯುವವರು ಇದ್ದಾರೆ’ ಎಂದುದೊಣ್ಣೆವರಸೆ ಗುರುಗಳಾದ ಪುಟ್ಟಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದೊಣ್ಣೆ ವರಸೆ ಚರಿತ್ರೆ

ಕರ್ನಾಟಕದ ಇತಿಹಾಸದಲ್ಲಿ ದೊಣ್ಣೆ ವರಸೆ ಕಲಿತವರನ್ನು ಸುಂಕ ವಸೂಲಿಗೆಕಳುಹಿಸಲಾಗುತ್ತಿತ್ತು ಎಂದು ಹೇಳುತ್ತದೆ ಇತಿಹಾಸ. ರಾಜ್ಯ ರಕ್ಷಣೆಯಲ್ಲಿ ಕಳ್ಳಕಾಕರನ್ನು ತಡೆಯಲುಕೋಲನ್ನು ಕುಶಲತೆಯಿಂದ ಬಳಸಬೇಕಿತ್ತು. ಲಾಟಿ ತಿರುಗಿಸಲು ಮುಂಜಾನೆ ಸಾಮುಮಾಡಬೇಕಿತ್ತು. ವ್ಯಾಯಾಮಕ್ಕೂ ಅವಕಾಶ ಇತ್ತು, ರಟ್ಟೆಯಲ್ಲಿ ಕಸುವು ಇದ್ದವರು ಕೋಲುಬಳಸಿ 64 ಪ್ರದರ್ಶನ ನೀಡುತ್ತಿದ್ದರು. ದಲಿತ, ಬೇಡ, ನಾಯಕ, ಉಪ್ಪಾರ ಜನಾಂಗಗಳಲ್ಲಿಇನ್ನೂ ಈ ಕಲೆಗಳನ್ನು ಪೋಷಿಸಿಕೊಂಡು ಬರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.