ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಬುಧವಾರ ಆಗಸದಲ್ಲಿ ಸೂರ್ಯನ ಸುತ್ತ ವೃತ್ತಾಕಾರದ ರಚನೆ ಗೋಚರಿಸಿದೆ.
ಅಪರೂಪದ ವಿದ್ಯಮಾನ ಜನರಲ್ಲಿ ಕುತೂಹಲ ಮೂಡಿಸಿತು. ಬೆಳಿಗ್ಗೆ 11 ಗಂಟೆಯ ನಂತರ ಈ ಉಂಗುರ ಗೋಚರಿಸಿದೆ. ಹಲವರು ಮೊಬೈಲ್, ಕ್ಯಾಮೆರಾದಲ್ಲೂ ವಿದ್ಯಮಾನವನ್ನು ಸೆರೆ ಹಿಡಿದಿದ್ದಾರೆ.
ಕಾರಣ ಏನು?
ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಬಿದ್ದು ವಕ್ರೀಭವನಗೊಂಡಾಗ ವೃತ್ತ ಗೋಚರಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.