ADVERTISEMENT

ಉಡಿಗಾಲ: ಬಣ್ಣಾರಿ ಅಮ್ಮನ್ ದೇವಾಲಯದಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 4:15 IST
Last Updated 10 ಜನವರಿ 2023, 4:15 IST
   

ಚಾಮರಾಜನಗರ: ತಾಲ್ಲೂಕಿನ ಉಡಿಗಾಲದ ಬಣ್ಣಾರಿ‌ ಅಮ್ಮನ್ ದೇವಾಲಯದಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ.

ರಾತ್ರಿ 10ರಿಂದ 10.30ರ ನಡುವೆ ಗೋಲಕ ಮುರಿದು ಹಣ ದೋಚಿದ್ದಾರೆ. ಮೂವರ ತಂಡ ಈ ಕೃತ್ಯ ಎಸಗಿದೆ ಎಂದು ಸ್ಥಳೀಯರು ಶಂಕಿಸಿದ್ದು, ಇಬ್ಬರು ದೇವಾಲಯದ ಒಳಕ್ಕೆ ನುಗ್ಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹುಂಡಿಯಲ್ಲಿ ಎಷ್ಟು ಹಣ ಇತ್ತು ಎಂಬುದು ಗೊತ್ತಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.