ADVERTISEMENT

ಗುಂಡ್ಲುಪೇಟೆ: ಕರಡಿ ಬೇಟೆಯಾಡಿದ ಹುಲಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 15:40 IST
Last Updated 25 ಜನವರಿ 2024, 15:40 IST
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಕೆರೆಯಲ್ಲಿ ಹುಲಿಯು ಕರಡಿಯನ್ನು ಭೇಟಿಯಾಡಿರುವುದು.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಕೆರೆಯಲ್ಲಿ ಹುಲಿಯು ಕರಡಿಯನ್ನು ಭೇಟಿಯಾಡಿರುವುದು.   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಕರಡಿಯನ್ನು ಬೇಟೆಯಾಡಿರುವ ಘಟನೆ ನಡೆದಿದ್ದು, ಸಫಾರಿಗೆ ತೆರಳಿದ ಪ್ರವಾಸಿರೊಬ್ಬರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತು ಬಂಡೀಪುರ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿ, ಬಂಡೀಪುರ ಸಫಾರಿ ರಸ್ತೆ ಬಳಿಯ ಕೆರೆಯೊಂದರಲ್ಲಿ ಹುಲಿಯು ಕರಡಿಯನ್ನು ಬೇಟೆಯಾಡಿದೆ ಎಂದು ಖಚಿತ ಪಡಿಸಿದ್ದಾರೆ.

ಕರಡಿಯೂ ಬಲಿಷ್ಠ ಪ್ರಾಣಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಹುಲಿಯನ್ನು ಎದುರಿಸಿ ಕಾಲ್ಕೀಳುವಂತೆ ಮಾಡಿದ ನಿದರ್ಶನಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.