
ಪ್ರಜಾವಾಣಿ ವಾರ್ತೆಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದ ಯರ್ಕೆಯಂ ಅರಣ್ಯದಲ್ಲಿ ಕಾಡುಗಳ್ಳ ವೀರಪ್ಪನ್ ಸಂಚಿಗೆ ನಿಷ್ಠಾವಂತ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಉಸಿರು ಚೆಲ್ಲಿದ್ದರು. ದಟ್ಟ ಅರಣ್ಯದೊಳಗೆ ನೆತ್ತರ ಕೋಡಿಯೇ ಹರಿದಿತ್ತು. ಈ ಕಹಿ ಘಟನೆ ನಡೆದು 34 ವರ್ಷಗಳು ಕಳೆದರೂ ಗ್ರಾಮಸ್ಥರ ಮನಸ್ಸಿನಿಂದ ಆ ನೋವು ಮಾಸಿಲ್ಲ. ಹುತಾತ್ಮ ಶ್ರೀನಿವಾಸ್ ಅವರನ್ನು ನೆನೆದು ಇಂದಿಗೂ ಕಣ್ಣೀರಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.