ADVERTISEMENT

ಚಾಮರಾಜನಗರ: ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ವೆಂಕಟರಮಣಸ್ವಾಮಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 16:06 IST
Last Updated 19 ಡಿಸೆಂಬರ್ 2021, 16:06 IST
ವೆಂಕಟರಮಣಸ್ವಾಮಿ
ವೆಂಕಟರಮಣಸ್ವಾಮಿ   

ಚಾಮರಾಜನಗರ: ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ನಗರದ ರಂಗಭೂಮಿ ಕಲಾವಿದ ವೆಂಕಟರಮಣಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಬಡಾವಣೆಯ ನಿವಾಸಿಯಾಗಿರುವ ಅವರು 12ನೇ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ವಂಶಪಾರಂಪರ್ಯವಾಗಿ ಬಂದಿರುವ ಕಲೆಯನ್ನು ಪೋಷಿಸಿಕೊಂಡು ಬಂದಿರುವ 70 ವರ್ಷ ವಯಸ್ಸಿನ ವೆಂಕಟರಮಣಸ್ವಾಮಿ ಅವರು ಪೌರಾಣಿಕ ನಾಟಕಗಳಲ್ಲಿ ನಾರದನ ಪಾತ್ರದ ಮೂಲಕ ಗುರುತಿಸಿಕೊಂಡವರು.

ಇದೇ 26ರಂದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ADVERTISEMENT

ಬಣ್ಣದ ಬಸವರಾಜಪ್ಪ ರಂಗಪ್ರಶಸ್ತಿ (2020–21) ಹಾಗೂ ಕರ್ನಾಟಕ ಕಲಾರತ್ನ ಪ್ರಶಸ್ತಿಗಳು (2016) ಈಗಾಗಲೇ ಅವರ ಮುಡಿಗೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.