ಚಿಂತಾಮಣಿ: ನಗರದ ವಿದ್ಯುತ್ ಉಪ ವಿಭಾಗದ ಎಫ್-13 ಸಪ್ತಗಿರಿ ಹಾಗೂ ಎಫ್-8 ಮಾರ್ಗಗಳ ಆಟೊ ರಿಕ್ಲೋಸರ್ ಮತ್ತು ಕವರ್ಡ್ ಕಂಡೆಕ್ಟರ್ ತುರ್ತು ಕಾಮಗಾರಿಯನ್ನು ಸೆ. 6ರಿಂದ 8ರವರೆಗೆ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಟಿಪ್ಪುನಗರ, ಚೌಡರೆಡ್ಡಿಪಾಳ್ಯ, ಅಜಾದ್ ಚೌಕ, ದೊಡ್ಡಪೇಟೆ, ಜೆ.ಜೆ. ಕಾಲೊನಿ, ಅಗ್ರಹಾರ, ಶ್ರೀಪಟಾಲಮ್ಮ ದೇವಸ್ಥಾನ, ಡೈಮಂಡ್ ಟಾಕೀಸ್ ರಸ್ತೆ, ಶ್ರೀರಾಮನಗರ, ಎಪಿಎಂಸಿ ಮಾರ್ಕೆಟ್, ರೈಲ್ವೆ ಸ್ಟೇಷನ್, ಚೇಳೂರು ರಸ್ತೆ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತದೆ. ಗ್ರಾಹಕರು ಮುಂಜಾಗ್ರತೆ ವಹಿಸಬೇಕು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್. ಜಯಂತ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.