ADVERTISEMENT

ಚಿಕ್ಕಬಳ್ಳಾಪುರ: ಮೂವರು ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:22 IST
Last Updated 16 ಡಿಸೆಂಬರ್ 2025, 5:22 IST
ವಶಕ್ಕೆ ಪಡೆದಿರುವ ನಗದು ಮತ್ತು ಚಿನ್ನಾಭರಣದ ಜೊತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು
ವಶಕ್ಕೆ ಪಡೆದಿರುವ ನಗದು ಮತ್ತು ಚಿನ್ನಾಭರಣದ ಜೊತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು   

ಚಿಕ್ಕಬಳ್ಳಾಪುರ: ನಗರ ಹೊರವಲಯದ ಅಣಕನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಹೈದರಾಬಾದ್‌ನ ರಾಹುಲ್ ಕುಮಾರ್ ಶರ್ಮಾ, ನಲ್ಲೂರಿನ ಹನುಮ ಸಮುದ್ರಪೇಟದ ಸೈಯದ್ ದಾವೂದ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಜಾತವಾರ ಗ್ರಾಮದ ಅಲ್ಲಾಭಕ್ಷ್ ಬಂಧಿತರು.

ಆರೋಪಿಗಳಿಂದ 20 ಗ್ರಾಂನ ಚಿನ್ನದ ನಕ್ಲೇಸ್, ₹25,000 ನಗದು ವಶಕ್ಕೆ ಪಡೆಯಲಾಗಿದೆ.

ADVERTISEMENT

ಅಣಕನೂರಿನ ನಾಗರಾಜು ಎಂಬುವವರ ಮನೆಯಲ್ಲಿ ನ.27ರಂದು ಬೆಳಗಿನ ಸಮಯದಲ್ಲಿ ಚಿನ್ನಾಭರಣ ಮತ್ತು ₹2.50 ಲಕ್ಷ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. 

ಆರೋಪಿಗಳ ಪತ್ತೆಗೆ ಸಿಪಿಐ ರಂಜನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.