ADVERTISEMENT

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 12:53 IST
Last Updated 3 ಮಾರ್ಚ್ 2021, 12:53 IST
   

ಚಿಕ್ಕಬಳ್ಳಾಪುರ: ಜನಧ್ವನಿ ಯಾತ್ರೆಗೆ ಬಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಜಯಕಾರದ ಘೋಷಣೆಗಳ‌ ಮೂಲಕ ಸ್ವಾಗತಿಸಿದರು.

ಕಂದಾವರ ಕೆರೆಗೆ ಬಾಗಿನ‌ ಅರ್ಪಿಸಿ ಬಂದ ನಾಯಕರನ್ನು ಬಿಬಿ ರಸ್ತೆಯಲ್ಲಿ ಸ್ವಾಗತಿಸಲಾಯಿತು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜನರತ್ತ ಕೈ ಬೀಸುತ್ತ ತೆರೆದ ವಾಹನದಲ್ಲಿ ಯಾತ್ರೆ ಆರಂಭಿಸಿದ್ದಾರೆ.ಪಕ್ಷದ ರಾಜ್ಯ ನಾಯಕರು ಸಾಥ್ ನೀಡಿದ್ದಾರೆ.

ADVERTISEMENT

ರಮೇಶ್ ಜಾರಕಿಹೊಳಿ ನೆನ್ನೆಯೇ ರಾಜೀನಾಮೆ ಕೊಡ ಬೇಕಿತ್ತು:ರಮೇಶ್ ಜಾರಕಿಹೊಳಿ ನಿನ್ನೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ತಮ್ಮ ಅಕ್ರಮಗಳಿಗೆ ಕರ್ನಾಟಕ ಭವನ ಸೇರಿದಂತೆ ಸರ್ಕಾರಿ ಬಂಗಲೆಗಳನ್ನು ದುರುಪಯೋಗ ಮಾಡಿಕೊಂಡಿರುವುದು ಅಕ್ರಮ ಎಂದು ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಕಂದಾವರ ಕೆರೆಗೆ ಬಾಗಿನ ಅರ್ಪಿಸಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.