ADVERTISEMENT

ಗೌರಿಬಿದನೂರು: ರಾಸುಗಳ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:17 IST
Last Updated 23 ಅಕ್ಟೋಬರ್ 2021, 6:17 IST
ಗೌಡಗೆರೆಯಲ್ಲಿ ನಡೆದ ರಾಸುಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಶು ವೈದ್ಯರಾದ ಡಾ.ಎಸ್.ಮಾರುತಿ, ಹಾಲು‌ ಒಕ್ಕೂಟದ ವಿಸ್ತರಣಾಧಿಕಾರಿ ವಿಜಯಕುಮಾರ್, ಸಂಯೋಜನಾಧಿಕಾರಿ ಡಾ.ಸಿ.ನಾರಾಯಣಸ್ವಾಮಿ, ಗ್ರಾ.ಪಂ ಅಧ್ಯಕ್ಷರಾದ ತನುಜಾ ರಾಜಶೇಖರ್, ಸದಸ್ಯ ಹರೀಶ್, ಪವಿತ್ರಾ, ನಾರಾಯಣಸ್ವಾಮಿ, ನೀಲಕಂಠಯ್ಯ ಇದ್ದರು
ಗೌಡಗೆರೆಯಲ್ಲಿ ನಡೆದ ರಾಸುಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಶು ವೈದ್ಯರಾದ ಡಾ.ಎಸ್.ಮಾರುತಿ, ಹಾಲು‌ ಒಕ್ಕೂಟದ ವಿಸ್ತರಣಾಧಿಕಾರಿ ವಿಜಯಕುಮಾರ್, ಸಂಯೋಜನಾಧಿಕಾರಿ ಡಾ.ಸಿ.ನಾರಾಯಣಸ್ವಾಮಿ, ಗ್ರಾ.ಪಂ ಅಧ್ಯಕ್ಷರಾದ ತನುಜಾ ರಾಜಶೇಖರ್, ಸದಸ್ಯ ಹರೀಶ್, ಪವಿತ್ರಾ, ನಾರಾಯಣಸ್ವಾಮಿ, ನೀಲಕಂಠಯ್ಯ ಇದ್ದರು   

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ಮತ್ತು ಬಿ.ಎಸ್ಸಿ ಕೃಷಿ ಮಾರಾಟ ಮತ್ತು ಸಹಕಾರ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಪಶು ಆರೋಗ್ಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.

ಪಶು ವೈದ್ಯ ಡಾ.ಎಸ್.ಮಾರುತಿ ಮಾತನಾಡಿ, ಹೈನುಗಾರಿಕೆಯು ಕೃಷಿಯ ಅವಿಭಾಜ್ಯ ಅಂಗವಾಗಿದ್ದು, ಗ್ರಾಮೀಣ ಭಾಗದಲ್ಲಿನ ರೈತರು ಹೆಚ್ಚಾಗಿ ಹೈನುಗಾರಿಕೆ ಮೇಲೆ ಅವಲಂಬಿತವಾಗಿದ್ದಾರೆ. ಪಶು ಇಲಾಖೆಯು ಸದಾ ರೈತರ ಹಿತ ಕಾಪಾಡಲು ಬದ್ಧವಾಗಿದೆ ಎಂದರು.

ಕೋಚಿಮುಲ್ ವಿಸ್ತರಣಾಧಿಕಾರಿ ವಿಜಯಕುಮಾರ್ ಮಾತನಾಡಿದರು. ಪಶು ವೈದ್ಯ ಡಾ.ಕಾರ್ತಿಕ್, ಪಶು ವೈದ್ಯ ಸಹಾಯಕ ವ್ಯವಸ್ಥಾಪಕ ಡಾ.ಎಚ್.ಎನ್. ಸಾಗರ್ ಗೌಡ, ಜಿಕೆವಿಕೆ ಗ್ರಾಮೀಣ ಕೃಷಿ ಕಾರ್ಯಾನುಭವದ ಸಹ ಸಂಯೋಜಕ ಡಾ.ಸಿ. ನಾರಾಯಣಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ರಾಜಶೇಖರ್, ಸದಸ್ಯ ಹರೀಶ್, ಪವಿತ್ರಾ, ನಾರಾಯಣಸ್ವಾಮಿ, ನೀಲಕಂಠಯ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.