ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಹಾಗೂ ಮಾಡಕು ಹೊಸಹಳ್ಳಿ ಭಾಗದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಿಡ್ಲಘಟ್ಟದ ಅಭಿಷೇಕ್ (27), ದೊಡ್ಡಬಳ್ಳಾಪುರ ತಾಲ್ಲೂಕು ಹೆಗ್ಗಡಿಹಳ್ಳಿಯ ಕಿರಣ್ (28) ಹಾಗೂ ಕೊಡುಗ ಜಿಲ್ಲೆಯ ಕಂಬಿಬಾಣೆಯ ಸುಧೀಶ್ ಬಂಧಿತರು.
ಸುಲ್ತಾನ್ ಪೇಟೆಯ ನಾಗರಾಜ್, ಶಿಡ್ಲಘಟ್ಟದ ಫೈರೋಜ್ನಿಂದ ಗಾಂಜಾ ತರಿಸಿಕೊಂಡು ಅವುಗಳನ್ನು ಪ್ಯಾಕೇಟ್ ಮಾಡಿ ಕಿರಣ್, ಸುದೀಶ್, ನಂದಿಯ ನಂದನ್, ಮಧು ಹಾಗೂ ಮನು ಎಂಬುವವರ ಮಾರಾಟ ಮಾಡಿಸುತ್ತಿದ್ದರು ಎಂದು ಅಭಿಷೇಕ್ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ 500 ಗ್ರಾಂ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಪ್ರಶಾಂತ್, ಸಿಬ್ಬಂದಿ ರವಿಕುಮಾರ್, ವಿಜಯ್ ಕುಮಾರ್, ನಾಗೇಶ್, ಶೇಖರ್, ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.