ADVERTISEMENT

ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:40 IST
Last Updated 14 ಆಗಸ್ಟ್ 2020, 16:40 IST
ಶ್ರೀನಿವಾಸರೆಡ್ಡಿ
ಶ್ರೀನಿವಾಸರೆಡ್ಡಿ   

ಬಾಗೇಪಲ್ಲಿ: ದಿಗವಮದ್ದಲಖಾನ ಗ್ರಾಮದ ರೈತಶ್ರೀನಿವಾಸರೆಡ್ಡಿ (55) ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದಲ್ಲಿ ತಮ್ಮ 5 ಏಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ವಿವಿಧೆಡೆ ಸಾಲ ಪಡೆದಿದ್ದರು.

‘ಕೆನರಾ ಬ್ಯಾಂಕ್‌ನಲ್ಲಿ ₹ 10 ಲಕ್ಷ, ₹4 ಲಕ್ಷ ಕೈಸಾಲ ಹಾಗೂ ಧರ್ಮಸ್ಥಳ ಯೋಜನೆಯಲ್ಲಿ ₹1 ಲಕ್ಷ ಸಾಲ ಪಡೆದಿದ್ದಾರೆ. ಟ್ರಾಕ್ಟರ್ ಸಾಲ ಸಮರ್ಪಕವಾಗಿ ಕಟ್ಟದೆ ಇದ್ದುದರಿಂದ, ಮಹೇಂದ್ರ ಟ್ರಾಕ್ಟರ್ ಫೈನಾನ್ಸ್‌ನಿಂದ ಟ್ರಾಕ್ಟರ್ ಜಪ್ತಿ ಮಾಡಿದ್ದರು. ಜಮೀನಿನಲ್ಲಿ ಮುಸಕಿನ ಜೋಳ, ನೆಲಗಡಲೆ ಬೆಳೆ ಬಾರದಿರು ವುದರಿಂದ ನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ’ ಎಂದು ಶ್ರೀನಿವಾಸರೆಡ್ಡಿ ಮಗ ಮಲ್ಲಿಕಾರ್ಜಿನ ತಿಳಿಸಿದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.