ADVERTISEMENT

ಶಿಡ್ಲಘಟ್ಟ: ಮಂಜು ಮುಸುಕಿದ ಚಳಿಯ ಮುಂಜಾವು

ಡಿ.ಜಿ.ಮಲ್ಲಿಕಾರ್ಜುನ
Published 15 ಫೆಬ್ರುವರಿ 2025, 6:06 IST
Last Updated 15 ಫೆಬ್ರುವರಿ 2025, 6:06 IST
ಶಿಡ್ಲಘಟ್ಟದ ಬೈಪಾಸ್ ರಸ್ತೆಯಲ್ಲಿ ಮಂಜಿನಿಂದ ಆವೃತವಾದ ಮುಂಜಾವಿನಲ್ಲಿ ದ್ವಿಚಕ್ರ ವಾಹನ ಸವಾರರು ದೀಪ ಉರಿಸಿಕೊಂಡು ಸಾಗಿದರು
ಶಿಡ್ಲಘಟ್ಟದ ಬೈಪಾಸ್ ರಸ್ತೆಯಲ್ಲಿ ಮಂಜಿನಿಂದ ಆವೃತವಾದ ಮುಂಜಾವಿನಲ್ಲಿ ದ್ವಿಚಕ್ರ ವಾಹನ ಸವಾರರು ದೀಪ ಉರಿಸಿಕೊಂಡು ಸಾಗಿದರು   

ಶಿಡ್ಲಘಟ್ಟ: ಹಗಲಿನಲ್ಲಿ ಚುರುಕು ಬಿಸಿಲಿದ್ದರೂ ಮುಂಜಾನೆಯ ಮಂಜು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಂಗಳವಾರ ಮುಂಜಾನೆ ಆವರಿಸಿದ್ದ ಮಂಜು ಬೆಳಗ್ಗೆ ಎಂಟು ಗಂಟೆಯಾದರೂ ಸೂರ್ಯನಿಗೆ ಜಾಗ ಕೊಟ್ಟಿರಲಿಲ್ಲ.

ಮುಂಜಾವಿನ ಮಂಜು ಮನಸ್ಸಿಗೆ ಹಿತ ನೀಡಿದರೂ ಮುಂಜಾನೆಯ ಚಳಿ ವಾತಾವರಣ ಬೆಳಗಿನ ಹೊತ್ತು ಕೆಲಸ ಮಾಡುವವರಿಗೆ ತೊಂದರೆಯೂ ಆಗಿದೆ.

ಕಳೆದ ಎರಡು ದಿನಗಳಿಂದ ಸೂರ್ಯೋದಯ ತಡವಾಗುತ್ತಿದ್ದು, ಮಂಜು ಆವರಿಸತೊಡಗಿದೆ. ವಾಹನಗಳು ದೀಪ ಹಾಕಿಕೊಂಡು ಹೋಗುವ ಸ್ಥಿತಿಯಿದೆ. ವಾಕಿಂಗ್ ಹೋಗುವವರು ಸ್ವೆಟರ್, ಶಾಲೆಗೆ ಹೋಗುವವರು ಟೊಪ್ಪಿಗಳಲ್ಲಿ ಬಂಧಿಯಾದರೆ, ಬಿಳಲುಗಳೊಂದಿಗಿನ ಆಲದ ಮರ ಮಂಜಿನ ಮರದಂತೆ ಭಾಸವಾಗುತ್ತದೆ. ನಗರದ ಕಟ್ಟಡಗಳೆಲ್ಲ ಮಂಜಿನ ಮುಸುಕು ಕಳೆದುಕೊಂಡಿದ್ದರೆ, ಅಲ್ಲಲ್ಲಿ ನಿಂತ ತೆಂಗಿನ ಮರಗಳು ಮಾತ್ರ ತಮ್ಮ ಇರುವನ್ನು ತೋರಗೊಡುವಂತೆ ಭಾಸವಾಗುತ್ತದೆ.

ADVERTISEMENT
ಶಿಡ್ಲಘಟ್ಟದ ಇಂದಿರಾ ಕ್ಯಾಂಟೀನ್ ಬಳಿ ಮಂಜಿನಿಂದಾವೃತ ರಸ್ತೆಯಲ್ಲಿ ವಾಹನದ ಸಂಚಾರ
ಕೆಂಬಣ್ಣದ ಹೂಬಿಟ್ಟ ಮರವೂ ಮಂಜಿಗೆ ಮುಸುಕಾಗಿದೆ
ಕೆರೆಯಲ್ಲಿ ಅಸ್ಪಷ್ಟವಾಗಿ ಕಾಣುವ ಮರ ಮತ್ತು ಅದರ ಪ್ರತಿಬಿಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.