ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ಚಿಕ್ಕಬಳ್ಳಾಪುರ: ತಾಲ್ಲಕಿನ ಐತಿಹಾಸಿಕ ನಂದಿಗಿರಿಧಾಮ ಈಗ ಪ್ರವಾಸಿಗರನ್ನು ಬರ ಸೆಳೆಯುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಗಿರಿಧಾಮಕ್ಕೆ ಮಂಜು ಮುತ್ತಿಕ್ಕುತ್ತದೆ. ಪ್ರಕೃತಿ ಪ್ರಿಯರು, ಚಾರಣ ಪ್ರಿಯರು, ಪ್ರವಾಸಿಗರು ಸಾಮಾನ್ಯ ದಿನಗಳಿಗಿಂತ ಚಳಿಗಾಲದಲ್ಲಿ ಗಿರಿಧಾಮಕ್ಕೆ ಹೆಚ್ಚು ಭೇಟಿ ನೀಡುತ್ತಾರೆ.
ಅದೂ ಬೆಳಂ ಬೆಳಿಗ್ಗೆಯೇ. ಗಿರಿಧಾಮದ ಆರಂಭದಿಂದ ಅಂತಿಮ ಹಂತದವರೆಗೂ ಕಾಡುಗಳಿಗೆ, ಗಿರಿ ಶಿಖರಗಳಿಗೆ ಮಂಜು ಮುತ್ತಿಕ್ಕಿರುತ್ತದೆ. ತೊಟಕ್... ತೊಟಕ್... ಎಂದು ಬೀಳುವ ಮಂಜಿನ ಹನಿಗಳಲ್ಲಿ ಮೀಯಲು ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಓಡುವ ಮೋಡಗಳೊಳಗೆ ಸೇರಿ ಆಹ್ಲಾದ ಅನುಭವಿಸುವರು.
ಬೆಟ್ಟ, ಕಾಡುಗಳನ್ನು ತಬ್ಬಿದ ಮಂಜಿನ ಹನಿಗಳು, ಓಡುವ ಮೋಡಗಳನ್ನು ಕಂಡು ಪುಳಕಿತರಾಗುತ್ತಾರೆ. ಬೆಳಿಗ್ಗೆ 11ರವರೆಗೂ ಮಂಜು ಬೆಟ್ಟವನ್ನು ಆವರಿಸಿರುತ್ತದೆ. ಬಿಸಿಲು ಅಡರಿದಂತೆ ಕರಗುತ್ತದೆ. ಅಷ್ಟರಲ್ಲಿ ಪ್ರವಾಸಿಗರ ಸಂಖ್ಯೆಯೂ ಕರಗುತ್ತದೆ.
ಈ ಚಳಿಗಾಲ ಹಾಗೂ ಮಂಜಿನಲ್ಲಿ ನಂದಿಗಿರಿಧಾಮದ ಮೀಯುವ ಸಮಯದಲ್ಲಿ ನಂದಿಗಿರಿಧಾಮವನ್ನು ನೋಡುವ ಸೊಗಬಗೇ ಚೆಂದ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿ ಇರುವ ಕಾರಣ ಬೆಂಗಳೂರಿಗರೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ
‘ಪ್ರಜಾವಾಣಿ’ ಬೆಂಗಳೂರು ಕಚೇರಿಯ ಛಾಯಾಗ್ರಹಕ ಎಂ.ಎಸ್.ಮಂಜುನಾಥ್ ಬೆಳ್ಳಂ ಬೆಳಿಗ್ಗೆಯ ನಂದಿಯ ಮೂಡ್ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ಚಿತ್ರಗಳು ಗಿರಿಧಾಮದ ಸೌಂದರ್ಯ ವೈಭವವನ್ನು ಸಾರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.