ಚಿಕ್ಕಬಳ್ಳಾಪುರ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ 120 ದಮನಿತ ಮಹಿಳೆಯರಿಗೆ ಹಾಗೂ ಸೋಂಕಿತರಿಗೆ ಮಂಗಳವಾರ ಚಿಕ್ಕಬಳ್ಳಾಪುರದ ಸೌಖ್ಯ ಸಂಜೀವಿನಿ ಸಂಸ್ಥೆ, ಬೆಂಗಳೂರಿನ ಸ್ವಸ್ತಿ ಸಂಸ್ಥೆ, ಗಿವ್ ಇಂಡಿಯಾ ಸಂಸ್ಥೆಗಳ ಸಹಯೋಗದಲ್ಲಿ ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೌಖ್ಯ ಸಂಜೀವಿನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಇಮ್ರಾನ್, ‘ಕಳೆದ 5 ತಿಂಗಳಿಂದ ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಹಾಗೂ ಸರ್ಕಾರದ ಸಹಕಾರದಿಂದ ದಿನಸಿ ಸಾಮಗ್ರಿಗಳು, ಔಷಧಿಗಳು, ಮಾಸ್ಕ್ ಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಜಿಲ್ಲೆಯಾದ್ಯಂತ 823 ದಮನಿತ ಮಹಿಳೆಯರಿಗೆ ಹಾಗೂ ಸೋಂಕಿತರಿಗೆ ವಿತರಿಸಲಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷೆ ಲಕ್ಷ್ಮೀ, ಯೋಜನಾ ವ್ಯವಸ್ಥಾಪಕ ಸಂದೀಪ್, ಸಿಬ್ಬಂದಿಗಳಾದ ಸುಮ, ವರಲಕ್ಷ್ಮೀ, ಮಮತ, ಮಂಜುಳಾ, ಚೌಡಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.