ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿನ್ನೆಹೊಸಹಳ್ಳಿ ಗ್ರಾಮದ ರಂಗಾರೆಡ್ಡಿ ಅವರ ಕುರಿ ಶೆಡ್ ಮೇಲೆ ಭಾನುವಾರ ರಾತ್ರಿ ನಾಯಿಗಳ ಹಿಂಡು ದಾಳಿ ನಡೆಸಿದೆ. 15 ಕುರಿಗಳು ಸಾವನ್ನಪ್ಪಿವೆ.
ಶೆಡ್ನಲ್ಲಿ 40 ಕುರಿಗಳು ಇದ್ದವು. ರಂಗಾರೆಡ್ಡಿ ರಾತ್ರಿ ಶೆಡ್ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಸಾವನ್ನಪ್ಪಿರುವುದು ಕಂಡು ಬಂದಿತು.
‘ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಜಾಗವನ್ನು ಬಾಡಿಗೆಗೆ ಪಡೆದು ಕುರಿ ಸಾಕುತ್ತಿದ್ದೇವೆ. ₹ 3 ಲಕ್ಷ ನಷ್ಟವಾಗಿದೆ. ನಮಗೆ ಜಮೀನಿಲ್ಲ. ಯಾವುದೇ ಬ್ಯಾಂಕುಗಳಿಂದ ಸಾಲವನ್ನೂ ನೀಡಿಲ್ಲ. ಖಾಸಗಿಯಾಗಿ ಸಾಲ ಮಾಡಿ ಕುರಿಗಳನ್ನು ಸಾಕುತ್ತಿದ್ದೆವು. ಈ ಕುರಿಗಳೇ ನಮ್ಮ ಬದುಕಿಗೆ ಆಧಾರವಾಗಿದ್ದವು‘ ಎಂದು ರಂಗಾರೆಡ್ಡಿ ಕಣ್ಣೀರಾದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.