ADVERTISEMENT

ಚಿಕ್ಕಮಗಳೂರು: 12 ಸಾವಿರ ಬಿಪಿಎಲ್ ಕಾರ್ಡ್‌ ಅನರ್ಹ ಸಾಧ್ಯತೆ

ಅನರ್ಹರಲ್ಲಿ 1.20 ಲಕ್ಷಕ್ಕೂ ಹೆಚ್ಚು ವರಮಾನ ಹೊಂದಿರುವ ಕುಟುಂಬಗಳೇ ಹೆಚ್ಚು

ವಿಜಯಕುಮಾರ್ ಎಸ್.ಕೆ.
Published 21 ಸೆಪ್ಟೆಂಬರ್ 2025, 5:41 IST
Last Updated 21 ಸೆಪ್ಟೆಂಬರ್ 2025, 5:41 IST
<div class="paragraphs"><p>ಬಿಪಿಎಲ್ ಕಾರ್ಡ್‌</p></div>

ಬಿಪಿಎಲ್ ಕಾರ್ಡ್‌

   

(ಸಾಂಕೇತಿಕ ಚಿತ್ರ)

ಚಿಕ್ಕಮಗಳೂರು: ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಇಲಾಖೆ ಗುರುತಿಸಿದ್ದು, ಅವುಗಳ ಮರು ಪರಿಶೀಲನೆಗೆ ಮುಂದಾಗಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 2.59 ಲಕ್ಷ ಪಡಿತರ ಚೀಟಿಗಳಿದ್ದು, ಇದರಲ್ಲಿ 2.37 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. ಈ ಪೈಕಿ 12,993 ಕಾರ್ಡ್‌ಗಳನ್ನು ಅನರ್ಹ ಎಂದು ಅನುಮಾನಿಸಿ ಆಹಾರ ಇಲಾಖೆ ಪಟ್ಟಿ ಮಾಡಿದೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಿದವರು, ಆದಾಯ ತೆರಿಗೆ ಪಾವತಿದಾರರು,  ವಾರ್ಷಿಕ ₹1.20 ಲಕ್ಷಕ್ಕೂ ಅಧಿಕ ವರಮಾನ ಹೊಂದಿರುವ ಕುಟುಂಬಗಳೇ 11 ಸಾವಿರಕ್ಕೂಹೆಚ್ಚಿವೆ. 3 ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿ ಹೊಂದಿದವರು, ಪಡಿತರ ಪಡೆಯದಿರುವ ಕುಟುಂಬಗಳು ಸಂಖ್ಯೆ 1 ಸಾವಿರಕ್ಕೂ ಅಧಿಕ ಇದೆ.

353 ಕುಟುಂಬಗಳು ಆರು ತಿಂಗಳಿಂದ ಪಡಿತರ ಪಡೆದಿಲ್ಲ. 114 ಕುಟುಂಬಗಳು 12 ತಿಂಗಳಿಂದ ಪಡಿತರ ಪಡೆದಿಲ್ಲ. 183 ಕುಟುಂಬಗಳು 3 ಹೆಕ್ಟೇರ್‌ಗೂ ಅಧಿಕ ಭೂಮಿ ಹೊಂದಿವೆ. ಬಿಪಿಎಲ್ ಪಡಿತರ ಚೀಟಿ ಹೊಂದಲು ಈ ಕುಟುಂಬಗಳು ಅರ್ಹರಲ್ಲ ಎಂದು ಗುರುತಿಸಿ ಪಟ್ಟಿ ಮಾಡಲಾಗಿದೆ.

ಅಂತಹ ಕಾರ್ಡುದಾರರಿಗೆ ನೋಟಿಸ್ ನೀಡುವ ಕಾರ್ಯವನ್ನು ಆರಂಭಿಸಿತ್ತು. ಆದರೆ, ಸರ್ಕಾರದ ನಿರ್ದೇಶನದಂತೆ ನೋಟಿಸ್ ನೀಡುವ ಕಾರ್ಯವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಮರುಪರಿಶೀಲನೆ ಕಾರ್ಯ ಆರಂಭವಾಗಿದೆ.

ಮರುಪರಿಶೀಲನೆ ವೇಳೆ ಅನರ್ಹರು ಎಂದು ದೃಢಪಟ್ಟರೆ ಅಂತಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ ಆಗಿ ಪರಿವರ್ತಿಸಲಾಗುವುದು. ಯಾವುದೇ ಕಾರ್ಡ್‌ಗಳನ್ನೂ ರದ್ದುಗೊಳಿಸುವುದಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.