ADVERTISEMENT

ಹೊರನಾಡಿನಲ್ಲಿ ಯಡಿಯೂರಪ್ಪ ಕುಟುಂಬದಿಂದ ಚಂಡಿಕಾ ಹೋಮ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 4:54 IST
Last Updated 25 ಮಾರ್ಚ್ 2024, 4:54 IST
ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಡಿಯೂರಪ್ಪ ಕುಟುಂಬ ಭಾನುವಾರ ಚಂಡಿಕಾ ಹೋಮ ನೆರವೇರಿಸಿದ ನಂತರ ಜಿ.ಭೀಮೇಶ್ವರ ಜೋಷಿ ಪ್ರಸಾದ ವಿತರಣೆ ಮಾಡಿದರು
ಕಳಸ ತಾಲ್ಲೂಕಿನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಡಿಯೂರಪ್ಪ ಕುಟುಂಬ ಭಾನುವಾರ ಚಂಡಿಕಾ ಹೋಮ ನೆರವೇರಿಸಿದ ನಂತರ ಜಿ.ಭೀಮೇಶ್ವರ ಜೋಷಿ ಪ್ರಸಾದ ವಿತರಣೆ ಮಾಡಿದರು   

ಕಳಸ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ, ಹೋಮ ನೆರವೇರಿಸಿದರು.

ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಕುಟುಂಬದ ಸದಸ್ಯರೊಂದಿಗೆ ಅವರು ನವಚಂಡಿ ಪಾರಾಯಣ ನಡೆಸಿದರು. ಆನಂತರ ಅನ್ನಪೂರ್ಣೇಶ್ವರಿಗೆ ರಥೋತ್ಸವ ಸೇವೆ ಮತ್ತು ಮಹಾಚಂಡಿಕಾ ಹೋಮ ನೆರವೇರಿಸಿದರು.‌

ಲೋಕಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ ಕುಟುಂಬವು ಈ ಸೇವೆಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು. ದೇವಸ್ಥಾನದ ಮುಖ್ಯಸ್ಥ ಜಿ. ಭೀಮೇಶ್ವರ ಜೋಷಿ ಪ್ರಸಾದ ವಿತರಿಸಿದರು. ರಾಮನಾರಾಯಣ ಜೋಷಿ ಅವರು ಯಡಿಯೂರಪ್ಪ ಕುಟುಂಬವನ್ನು ದೇಗುಲಕ್ಕೆ ಬರಮಾಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.