ADVERTISEMENT

ಶೃಂಗೇರಿ: ವಸತಿಗೃಹದಲ್ಲಿ ಚೂರಿ ಇರಿತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 3:05 IST
Last Updated 3 ಮಾರ್ಚ್ 2021, 3:05 IST

ಶೃಂಗೇರಿ: ಶಾರದಾ ಮಠದ ವಸತಿ ಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಭಟ್ ಅವರಿಗೆ ಆಟೊ ಚಾಲಕ ಕಲ್ಕಟ್ಟೆ ರವೀಂದ್ರ ಮಂಗಳವಾರ ಚೂರಿಯಿಂದ ಇರಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರವೀಂದ್ರ ಕಲ್ಕಟ್ಟೆ ಅವರ ಪತ್ನಿ ಚಿತ್ರಾ ಅವರು ಅದೇ ವಸತಿ ಗೃಹದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು, ಮುಂಗಡ ಸಂಬಳದ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡ ಚಿತ್ರಾ ಅವರ ಪತಿ ಕಲ್ಕಟ್ಟೆ ರವೀಂದ್ರ ಎಂಬಾತ ನಾಗರಾಜ್ ಭಟ್ ಅವರಿಗೆ ಚೂರಿಯಿಂದ ಇರಿದಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ‌

ನಾಗರಾಜ್ ಭಟ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.