
ಚಿಕ್ಕಮಗಳೂರು: 25 ವರ್ಷ ಪೂರೈಸಿರುವ ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಬೆಳ್ಳಿ ಹಬ್ಬದ ಕಾರ್ಯಕ್ರಮಗಳಿಗೆ ಭಾನುವಾರ ತೆರೆ ಬಿದ್ದಿತು. ಇದರ ಅಂಗವಾಗಿ ಆಯೋಜಿಸಿದ್ದ ಸಿಲ್ವರ್ ಜೂಬಿಲಿ ಸಿಜಿಸಿ ಓಪನ್ ವಿಭಾಗದಲ್ಲಿ ವರುಣ್ ಗಣಪತಿ ಗೆಲುವು ಸಾಧಿಸಿದರೆ, ನಿಶಾಂತ್ ಕುಲಕರ್ಣಿ ರನ್ನರ್ ಅಪ್ ಆದರು.
ಪುರುಷರ ವಿಭಾಗದಲ್ಲಿ(ಹ್ಯಾಂಡಿಕ್ಯಾಪ್ 0–20) ಕೆ.ಆರ್. ವೈಶಾಖ್ ಗೆಲುವು ಸಾಧಿಸಿದರೆ, ಕೆ.ಆರ್.ವಿಹಾನ್ ರನ್ನರ್ ಅಪ್ ಆದರು. ಸಿಜಿಸಿ ಸದಸ್ಯರ(ಹ್ಯಾಂಡಿಕ್ಯಾಪ್ 15–24) ವಿಭಾಗದಲ್ಲಿ ನಿಶಾಂತ್ ಎ.ಎನ್. ಪ್ರಥಮ ಮತ್ತು ನಕುಲ್ ಕಿರಣ್ ದ್ವಿತೀಯ ಸ್ಥಾನ ಪಡೆದರು.
ಸಿಜಿಸಿ ಸದಸ್ಯರ (ಹ್ಯಾಂಡಿಕ್ಯಾಪ್ 0–14) ವಿಭಾಗದಲ್ಲಿ ವಿನಾಯಕ್ ಎ.ಯು. ಪ್ರಥಮ ಮತ್ತು ದರ್ಶನ್ ಟಿ.ಪಿ. ದ್ವಿತೀಯ ಸ್ಥಾನ, 70 ವರ್ಷ ಮೇಲ್ಪಟ್ಟವರ ಸ್ಟೇಬಲ್ಫೋರ್ಡ್(ಹ್ಯಾಂಡಿಕ್ಯಾಪ್ 0–24) ವಿಭಾಗದಲ್ಲಿ ಸುದರ್ಶನ್ ಮಾನೆ ಪ್ರಥಮ ಮತ್ತು ಜಿ.ಪಿ. ಮೂರ್ತಿ ದ್ವಿತೀಯ ಸ್ಥಾನ ಪಡೆದರು.
ಸಿಲ್ವರ್ ಜೂಬಿಲಿ ಫೌಂಡರ್ ಕಪ್ ಸ್ಟೇಬಲ್ಫೋರ್ಡ್(ಹ್ಯಾಂಡಿಕ್ಯಾಪ್– 0–24) ಸತ್ಯನಾರಾಯಣ ಎಸ್.ಎಲ್. ಪ್ರಥಮ ಮತ್ತು ಮಲ್ಲಪ್ಪಗೌಡ ದ್ವಿತೀಯ ಸ್ಥಾನ, ಸಿಲ್ವರ್ ಜೂಬಿಲಿ ವಿಸಿಟರ್ ಕಪ್ ಸ್ಟ್ರೋಕ್ ಪ್ಲೇ(ಹ್ಯಾಂಡಿಕ್ಯಾಪ್ 0–18) ವಿಭಾಗದಲ್ಲಿ ಕೆದಾರನಾಥ ಮುದ್ದ ಪ್ರಥಮ ಮತ್ತು ಸಂಜತ್ ಎ.ಆರ್. ದ್ವಿತೀಯ ಸ್ಥಾನ, ಸಿಲ್ವರ್ ಜೂಬಲಿ ಮಹಿಳಾ(ಹ್ಯಾಂಡಿಕ್ಯಾಪ್ 0–18) ವಿಭಾಗದಲ್ಲಿ ಶ್ವೇತಾ ರಾಮು ಪ್ರಥಮ ಮತ್ತು ಸೋನಿಯಾ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.
ಅತ್ಯಂತ ದೂರ ಡ್ರೈವ್ನಲ್ಲಿ ಶ್ರೀರಂಗ ಜಯರಾಮ್, ಪಿನ್ಗೆ ಹತ್ತಿರ ವಿಭಾಗದಲ್ಲಿ ಪ್ರಕಾಶ್ ಗಣೇಶ್, ನೇರ ಡ್ರೈವ್ನಲ್ಲಿ ಸಚಿನ್ ಸಾರಗೋಡು ಸಾಧನೆ ಮಾಡಿದರು. ಸಿಲ್ವರ್ ಜೂಬಿಲಿ ಸಿಜಿಸಿ ಕ್ಯಾಡಿಸ್ ವಿಭಾಗದಲ್ಲಿ ಅಮೃತ್ ಮತ್ತು ರಾಜ ಸಾಧನೆಯನ್ನು ಸ್ಮರಿಸಲಾಯಿತು.
ಪಂದ್ಯಾವಳಿಗಳಲ್ಲಿ ವಿಜೇತರಿಗೆ ಭಾನುವಾರ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ ಎ.ಬಿ.ಸುದರ್ಶನ್ ಮತ್ತು ಕ್ಲಬ್ನ ಕ್ಯಾಪ್ಟನ್ ಎ.ಬಿ. ರವಿಶಂಕರ್ ಬಹುಮಾನ ವಿತರಿಸಿದರು.