ಚಿಕ್ಕಮಗಳೂರು: ಬಿರು ಬಿಸಿಲಿನಿಂದ ಕಂಗಟ್ಟಿದ್ದ ಚಿಕ್ಕಮಗಳೂರು ನಗರದ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿದು ತಂಪೆರೆಯಿತು.
ಗುಡುಗು- ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚ ಕಾಲ ಮಳೆ ಸುರಿಯಿತು. ಅಪರೂಪದ ಆಲಿಕಲ್ಲು ಮಳೆ ಕಂಡು ಜನ ಸಂಭ್ರಮಿಸಿದರು. ರಸ್ತೆಗಳಲ್ಲಿ ನೀರು ಹರಿಯಿತು. ಮಳೆ ಇಲ್ಲದೆ ಬಿರಿದಿದ್ದ ಇಳೆ ತಂಪಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.