ಶೃಂಗೇರಿ (ಚಿಕ್ಕಮಗಳೂರು): ಶಾರದಾ ಪೀಠಕ್ಕೆ ಶಾಸಕ ಎಚ್.ಡಿ ರೇವಣ್ಣ ಮಂಗಳವಾರ ಭೇಟಿ ನೀಡಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೋರಣ ಗಣಪತಿ ದೇವಾಲಯದಲ್ಲಿ ದಾಖಲೆ, ‘ಬಿ’ ಫಾರಂಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಣಿಕೆಯಾಗಿ ₹1 ಲಕ್ಷ ನಗದನ್ನು ದೇವಸ್ಥಾನಕ್ಕೆ ನೀಡಿದರು.
ನಂತರ ನರಸಿಂಹವನದ ಗುರು ನಿವಾಸದಲ್ಲಿರುವ ಶಾರದಾ ಪೀಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.