ಚಿಕ್ಕಮಗಳೂರು: ‘ಶರಣ ನುಲಿಯ ಚಂದಯ್ಯ ಅವರುಹುಲ್ಲಿನಲ್ಲಿ ಹಗ್ಗ ಹೊಸೆದು, ಮಾರಾಟ ಮಾಡಿ ಜೀವನ ಸಾಗಿಸಿದವರು. ಈ ಕಾಯಕದ ಸಂಪಾ ದನೆಯನ್ನುಸಮಾಜ ಮತ್ತು ಭಗವಂತನ ಸೇವೆಗೆ ಮುಡಿಪಾಗಿಟ್ಟ ಮಹನೀಯ ಅವರು’ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾಯಕವೇ ಕೈಲಾಸ’ ಎಂಬ ಕಾಯಕ ನಿಷ್ಠೆಯ ಪ್ರತಿಪಾದಿಸಿದರು.ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಲು ಶ್ರಮಿಸಿದರು.ಕಾರಾವಾರದ ಉಡುಗಿ ಪ್ರದೇಶದಲ್ಲಿ ಹಲವಾರು ವರ್ಷ ವಚನ ಸಾಹಿತ್ಯದ ಪ್ರತಿಗಳನ್ನು ಸಿದ್ಧಪಡಿಸಿ ಮನೆಮನೆಗೆ ತಲುಪಿಸಿದರು ಎಂದರು.
ಶರಣರ ಬದುಕಿನಲ್ಲಿ ಸೋಮಾರಿತನಕ್ಕೆ ಜಾಗವಿಲ್ಲ. ಚಂದಯ್ಯ ಅವರು ಕಾಯಕದ ಮಹತ್ವವನ್ನು ಸಾರಿದರು. ದುರಾಸೆ ಇರಬಾರದು ಎಂದು ಬೋಧಿಸಿದರು ಎಂದರು.
ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಗ್ರಾಮದಲ್ಲಿ ನುಲಿಯ ಚಂದಯ್ಯನವರ ಹೆಸರಿನಲ್ಲಿ ದಾಸೋಹ ಮಂದಿರವಿರುವುದು ಹೆಮ್ಮೆಯ ವಿಚಾರ ಎಂದರು.
ರಮೇಶ್ ಬಂಗಾರ್ ತಂಡದವರು ‘ನುಲಿಯ ಚಂದಯ್ಯ’ ನಾಟಕ ಪ್ರದರ್ಶಿಸಿದರು. ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಕುಳುವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.