ADVERTISEMENT

ಕೊಟ್ಟಿಗೆಹಾರ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ ಪೆಟ್ರೋಲ್ ಟ್ಯಾಂಕರ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 12:27 IST
Last Updated 1 ಜುಲೈ 2023, 12:27 IST
ಕೊಟ್ಟಿಗೆಹಾರದಿಂದ ಬಣಕಲ್ ಸಾಗುವ ಮಾರ್ಗ ಮಧ್ಯೆ ಅಣಿ ಅಂತರದಲ್ಲಿ ಮಂಗಳೂರಿನಿಂದ ಅಜ್ಜಂಪುರ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ನಿಯಂತ್ರಣ ತಪ್ಪಿ ಕಂದಕಕ್ಕೆ ವಾಲಿರುವುದು
ಕೊಟ್ಟಿಗೆಹಾರದಿಂದ ಬಣಕಲ್ ಸಾಗುವ ಮಾರ್ಗ ಮಧ್ಯೆ ಅಣಿ ಅಂತರದಲ್ಲಿ ಮಂಗಳೂರಿನಿಂದ ಅಜ್ಜಂಪುರ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ನಿಯಂತ್ರಣ ತಪ್ಪಿ ಕಂದಕಕ್ಕೆ ವಾಲಿರುವುದು   

ಕೊಟ್ಟಿಗೆಹಾರ: ಮಂಗಳೂರಿನಿಂದ ಅಜ್ಜಂಪುರಕ್ಕೆ ಪೆಟ್ರೋಲ್ ತುಂಬಿಸಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಕೊಟ್ಟಿಗೆಹಾರ ಬಣಕಲ್ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ವಾಲಿದ್ದು ದೊಡ್ಡ ದುರಂತ ತಪ್ಪಿದಂತಾಗಿದೆ.

ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದ್ದರೆ ಸಾವಿರಾರು ಲೀಟರ್ ಪೆಟ್ರೋಲ್ ಸುರಿದು ದುರಂತವೇ ನಡೆದು ಹೋಗುತ್ತಿತ್ತು. ಸದ್ಯ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ದಿಣ್ಣೆಗೆ ವಾಲಿ ನಿಂತಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT