ADVERTISEMENT

ನರಸಿಂಹರಾಜಪುರ | ಮನೆಗಳಿಗೆ ಹಾನಿ: ರಸ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 15:36 IST
Last Updated 27 ಜುಲೈ 2023, 15:36 IST
ನರಸಿಂಹರಾಜಪುರ ತಾಲ್ಲೂಕು ಕುದುರೆಗುಂಡಿಯಿಂದ ಮಲ್ಲಂದೂರು ಗ್ರಾಮ ಮಧ್ಯೆ ಹಾದು ಹೋಗುವ ರಸ್ತೆ ಕುಸಿಯುವ ಭೀತಿ ಉಂಟಾಗಿದೆ
ನರಸಿಂಹರಾಜಪುರ ತಾಲ್ಲೂಕು ಕುದುರೆಗುಂಡಿಯಿಂದ ಮಲ್ಲಂದೂರು ಗ್ರಾಮ ಮಧ್ಯೆ ಹಾದು ಹೋಗುವ ರಸ್ತೆ ಕುಸಿಯುವ ಭೀತಿ ಉಂಟಾಗಿದೆ   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಗಾಳಿ– ಮಳೆಗೆ ಹಲವು ಗ್ರಾಮಗಳಲ್ಲಿ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ.

ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಬಾಗಿಲು ಗ್ರಾಮದ ಎ.ಪಿ.ಪದ್ಮನಾಭ ಎಂಬುವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಮೇಗರಮಕ್ಕಿ ಗ್ರಾಮದ ಜೀರುಳಿ ವಾಸಿಯಾದ ಶಾರದಮ್ಮ ಎಂಬುವರ ಮನೆಯ ಪಕ್ಕದಲ್ಲಿದ್ದ ಕೊಟ್ಟಿಗೆಗೆ ಹಾನಿಯಾಗಿದೆ. ಅಂಡವಾನಿಗದ್ದೆ ನಿವಾಸಿ ಸುರಯ್ಯ ಎಂಬುವರ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ಹಾನಿಯಾಗಿದೆ.

ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆಗುಂಡಿ ಮತ್ತು ಮಲ್ಲಂದೂರು ರಸ್ತೆ ಮಧ್ಯೆ ಬರುವ ಬೆಮ್ಮನೆ ಸಮೀದ ಕುರುಡನಗದ್ದೆ ತಿರುವಿನ ರಸ್ತೆಯ ಒಂದು ಭಾಗದ ಧರೆ ಕುಸಿದಿದ್ದು, ರಸ್ತೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ. ರಸ್ತೆ ಕುಸಿತವಾದರೆ ಕುದುರೆಗುಂಡಿ ಮತ್ತು ಮಲ್ಲಂದೂರಿಗೆ ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಭಾರಿ ವಾಹನಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ ಕುಸಿತವಾದ ಜಾಗದಲ್ಲಿ ಎಚ್ಚರಿಕೆಯ ಫಲಕ ಹಾಕಬೇಕು. ತುರ್ತು ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT
ನರಸಿಂಹರಾಜಪುರ ತಾಲ್ಲೂಕು ಮೇಗರಮಕ್ಕಿ ಗ್ರಾಮದ ಅಂಡವಾನಿಗದ್ದೆ ವಾಸಿ ಸೂರಯ್ಯ ಅವರ ಮನೆಯ ಚಾವಣಿ ಗೋಡೆ ಕುಸಿದು ಹಾನಿಯಾಗಿದೆ
ನರಸಿಂಹರಾಜಪುರ ತಾಲ್ಲೂಕು ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆ ಗ್ರಾಮದ ಮೂಡಬಾಗಿಲು ನಿವಾಸಿ ಎ.ಪಿ.ರವೀಂದ್ರ ಎಂಬುವರ ಮನೆಯ ಗೋಡೆ ಮಳೆಗೆ ಕುಸಿದಿದೆ
ನರಸಿಂಹರಾಜಪುರ ತಾಲ್ಲೂಕು ಮೇಗರಮಕ್ಕಿ ಗ್ರಾಮದ ಜೀರುಳಿ ನಿವಾಸಿಯಾದ ಶಾರದಮ್ಮ ಎಂಬುವರ ಮನೆಯ ಪಕ್ಕದ ಕೊಟ್ಟಿಗೆ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.