ADVERTISEMENT

ಟಿಎಪಿಸಿಎಂಎಸ್ ಚುನಾವಣೆ: ಕಾಂಗ್ರೆಸ್‌–ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:34 IST
Last Updated 23 ಡಿಸೆಂಬರ್ 2025, 6:34 IST
ತರೀಕೆರೆ ಟಿಎಪಿಸಿಎಂಎಸ್ ‘ಬಿ’ ವರ್ಗದ 7 ನಿರ್ದೇಶಕರ ಚುನಾವಣೆಯಲ್ಲಿ ಎಡದಿಂದ ಬಲಕ್ಕೆ ಎಚ್.ಸಿ.ಬಸವರಾಜಪ್ಪ, ಉಮಾಶಂಕರ್, ಎಂ.ನರೇಂದ್, ಆರ್.ಹಾಲಪ್ಪ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್‍ ಅಭ್ಯರ್ಥಿಗಳು
ತರೀಕೆರೆ ಟಿಎಪಿಸಿಎಂಎಸ್ ‘ಬಿ’ ವರ್ಗದ 7 ನಿರ್ದೇಶಕರ ಚುನಾವಣೆಯಲ್ಲಿ ಎಡದಿಂದ ಬಲಕ್ಕೆ ಎಚ್.ಸಿ.ಬಸವರಾಜಪ್ಪ, ಉಮಾಶಂಕರ್, ಎಂ.ನರೇಂದ್, ಆರ್.ಹಾಲಪ್ಪ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್‍ ಅಭ್ಯರ್ಥಿಗಳು   

ತರೀಕೆರೆ: ಪಟ್ಟಣದ ಟಿಎಪಿಸಿಎಂಎಸ್ ‘ಬಿ’ ವರ್ಗದ 7 ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟದ ಏಳೂ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ ಎಂದು ಜೆಡಿಎಸ್‌ನ ತಾಲ್ಲೂಕು ಅಧ್ಯಕ್ಷ ಎಂ.ನರೇಂದ್ರ ಹೇಳಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರ ಜತೆ ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 14 ಸ್ಥಾನಗಳ ಪೈಕಿ ‘ಎ’ ವರ್ಗದ 6 ಸ್ಥಾನಗಳು ಅವಿರೋಧವಾಗಿ ಆಯ್ಕೆ ನಡೆದಿದೆ. ‘ಬಿ’ ವರ್ಗದ ನಿರ್ದೇಶಕ (ಪ.ಪಂ) ಸ್ಥಾನಕ್ಕೆ ಜೆಡಿಎಸ್‌ನ ಆರ್. ಹಾಲಪ್ಪ ಅವಿರೋಧ ಆಯ್ಕೆಯಾಗಿದ್ದರು. ಉಳಿದ 7 ಸ್ಥಾನಗಳಲ್ಲಿ 3 ಜೆಡಿಎಸ್‌ ಹಾಗೂ 4 ಸ್ಥಾನಗಳನ್ನು ಕಾಂಗ್ರೆಸ್‍ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಹೇಳಿದರು.

ಎಂ.ನರೇಂದ್ರ (ಬಿಸಿಎಂ ‘ಎ’), ಉಮಾಶಂಕರ್ (ಬಿಸಿಎಂ‘ಬಿ’) ಎಚ್.ಸಿ. ಬಸವರಾಜಪ್ಪ (ಪ.ಜಾತಿ) ಗೆದ್ದ ಜೆಡಿಎಸ್‍ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮುಖಂಡರ ಉದಾಸೀನತೆ ಮತ್ತು ನಿರ್ಲಕ್ಷ್ಯದಿಂದ ಬೇಸತ್ತು ಜೆಡಿಎಸ್‌ ಪಕ್ಷವು ಅನಿವಾರ್ಯವಾಗಿ ಸ್ಥಳೀಯವಾಗಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.