ADVERTISEMENT

ಆಲ್ದೂರು: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 4:08 IST
Last Updated 30 ನವೆಂಬರ್ 2022, 4:08 IST
ಪೊಲೀಸರು ಬಂಧಿಸಿರುವ ಆರೋಪಿಗಳು (ಕೆಳಗೆ ಕುಳಿತವರು) ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು
ಪೊಲೀಸರು ಬಂಧಿಸಿರುವ ಆರೋಪಿಗಳು (ಕೆಳಗೆ ಕುಳಿತವರು) ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು   

ಆಲ್ದೂರು: ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ವಾರದ ಹಿಂದೆ ನಡೆದ ಕಳವು ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮೂವರನ್ನು ಬಂಧಿಸಿದ್ದು, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಸ್ಸಾಂ ಮೂಲದ ಕುರ್ಬನ್ ಅಲಿ, ನೂರ್ ಅಹಮದ್, ಸಫಿಕುಲ್ ಇಸ್ಲಾಂ ಬಂಧಿತರು. ಗ್ರಾಮದ ಶೈಲಾ ಎಂಬುವವರ ಮನೆಯಲ್ಲಿದ್ದ ಡಿಎಸ್ಎಲ್ಆರ್ ಕ್ಯಾಮೆರಾ, ಸ್ಮಾರ್ಟ್ ಫೋನ್ ಮತ್ತಿತರ ವಸ್ತುಗಳು ಕಳುವಾದ ಬಗ್ಗೆ ನ.11ರಂದು ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳ ಮೇಲೆ ಮೂಡಿಗೆರೆ, ಗೋಣಿಬೀಡು, ಕೊಡಗು, ಮುಂತಾದ ಕಡೆಗಳಲ್ಲಿ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಸ್ಐ ಕೀರ್ತಿ ಕುಮಾರ್ ನೇತೃತ್ವದಲ್ಲಿ ಎಎಸ್ಐ ಪರಮೇಶ್ ಗೌಡ, ಹೆಡ್ ಕಾನ್‌ಸ್ಟೆಬಲ್ ರಂಗೇಗೌಡ ಸಿಬ್ಬಂದಿ ಶಿವಕುಮಾರ್ ಜಗದೀಶ್ ತನ್ವೀರ್ ಅಹಮದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.