ADVERTISEMENT

ಚಿಕ್ಕಮಗಳೂರು: ವಚನ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:28 IST
Last Updated 9 ಜುಲೈ 2022, 6:28 IST

ಬೀರೂರು(ಕಡೂರು): ಚಿಕ್ಕಮಗಳೂರು ಜಿಲ್ಲಾಮಟ್ಟದ ದ್ವಿತೀಯ ವಚನ ಸಾಹಿತ್ಯ ಸಮ್ಮೇಳನವು ಕಡೂರಿನ ಹೊಸಳ್ಳಿಯ ಗಂಗಾಂಬಿಕಾ ಕಲ್ಯಾಣಮಂಟಪದಲ್ಲಿ ಶನಿವಾರ ನಡೆಯಬೇಕಾಗಿತ್ತು. ಆದರೆ, ಕಡೂರಿನ ರಾಜಕಾರಣಿ ಕೆ.ಎಂ.ಕೆಂಪರಾಜು ಶುಕ್ರವಾರ ನಿಧನರಾಗಿದ್ದು, ಸಿರಿಗೆರೆ ಶ್ರೀಯವರು ಮತ್ತು ಶಾಸಕ ಬೆಳ್ಳಿಪ್ರಕಾಶ್ ಅವರೊಂದಿಗೆ ಚರ್ಚಿಸಿದ ಬಳಿಕ ಮೃತರ ಗೌರವಾರ್ಥ ಸಮ್ಮೇಳನ ಮುಂದೂಡಲು ನಿರ್ಧರಿಸಲಾಗಿದೆ

ಸಮ್ಮೇಳನದ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆಯೋಜನಾ ಸಮಿತಿ ಗೌರವಾಧ್ಯಕ್ಷ ಎಚ್.ಎಂ.ಲೋಕೇಶ್, ಸಿಂಗಟಗೆರೆ ಸಿದ್ದಪ್ಪ, ವಡೇರಹಳ್ಳಿ ಅಶೋಕ, ಬ್ಯಾಗಡೆಹಳ್ಳಿ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT