ADVERTISEMENT

ಕಳಸದಲ್ಲಿ ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 13:14 IST
Last Updated 1 ಸೆಪ್ಟೆಂಬರ್ 2024, 13:14 IST
ಕಳಸದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್ ಷಷ್ಟಿಪೂರ್ತಿ ಆಚರಣೆ ಮೆರವಣಿಗೆಯಲ್ಲಿ ರಾಧಾ– ಕೃಷ್ಣ ವೇಷ ಧರಿಸಿ ಮಕ್ಕಳು ಗಮನ ಸೆಳೆದರು
ಕಳಸದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್ ಷಷ್ಟಿಪೂರ್ತಿ ಆಚರಣೆ ಮೆರವಣಿಗೆಯಲ್ಲಿ ರಾಧಾ– ಕೃಷ್ಣ ವೇಷ ಧರಿಸಿ ಮಕ್ಕಳು ಗಮನ ಸೆಳೆದರು   

ಕಳಸ: ವಿಶ್ವಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ಕಳೆದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಷಷ್ಠಿಪೂರ್ತಿ ಸಮಾರೋಪ ಸಮಾರಂಭ ನಡೆಯಿತು.

ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಳಸೇಶ್ವರ ಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ರಾಧೆ ಮತ್ತು ಕೃಷ್ಣ ವೇಷಧಾರಿ ಮಕ್ಕಳು ಸಂಕೀರ್ಣ ಯಾತ್ರೆಯಲ್ಲಿ ಭಾಗವಹಿಸಿ ಮೆರುಗು ತುಂಬಿದರು.

ವಿಶ್ವ ಹಿಂದೂ ಪರಿಷತ್ ಶೃಂಗೇರಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕುಮಾರ್, ವಿಎಚ್‍ಪಿ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಪ್ರಬೋಧಿನಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಭಟ್ ಮಾತನಾಡಿದರು.

ADVERTISEMENT

ದುರ್ಗಾವಾಹಿನಿ ಸಹ ಸಂಯೋಜಕಿ ಪಾರ್ವತಿ, ಮೈನಾ ಕುಲಾಕಲ್, ಮಾಲತಿ ರಾವ್, ಬಬ್ಬುಸ್ವಾಮಿ ದೇಗುಲದ ಗುರಿಕಾರ ಜಗನ್ನಾಥ್, ಆದಿವಾಸಿ ರಕ್ಷಣಾ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ, ,ಬಜರಂಗದಳದ ಪದಾಧಿಕಾರಿ ಜಗದೀಶ್ ಭಟ್, ಅಜಿತ್ ಕುಲಾಲ್, ಸುಜಿಲ್, ಸಮಾಗಾರ ಸಮುದಾಯದ ಮೋಹನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.