ADVERTISEMENT

ಭದ್ರಾ ಬಲದಂಡೆ ಕಾಲುವೆಗೆ ವಾಹನ ಪಲ್ಟಿ: ಮಹಿಳೆ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 10:58 IST
Last Updated 24 ಆಗಸ್ಟ್ 2020, 10:58 IST
ಭದ್ರಾ ನಾಲೆ
ಭದ್ರಾ ನಾಲೆ   

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ಭದ್ರಾ ಬಲದಂಡೆ ನಾಲೆಗೆ ಬೊಲೊರೊ ಪಿಕ್ಅಪ್ ವಾಹನ ಉರುಳಿದೆ. ಸರ್ವಮಂಗಳಾ ನೀರುಪಾಲಾಗಿದ್ದು, ಪತಿ ಸಂತೋಷ್ ಜೈನ್ ಪಾರಾಗಿದ್ದಾರೆ.

ಸೋಮಪುರದ ಈ ದಂಪತಿ ದೇಗುಲಕ್ಕೆ ತೆರಳಿ ವಾಪಸಾಗುವಾಗ ಅವಘಡ ಸಂಭವಿಸಿದೆ.ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಾಲುವೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ವಮಂಗಳಾ ಅವರಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಶುರುವಾಗಿದೆ. ವಾಹನವನ್ನು ಕಾಲುವೆಯಿಂದ ಹೊರಕ್ಕೆ ತೆಗೆಯಲಾಗಿದೆ.

ADVERTISEMENT

ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.