ADVERTISEMENT

ಅಪಘಾತ ಪ್ರಕರಣ| ಮೃತ ಕುಟುಂಬದವರಿಗೆ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 13:58 IST
Last Updated 27 ಜೂನ್ 2019, 13:58 IST
ಅಪಘಾತದಿಂದ ಮೃತಪಟ್ಟ ಕುಟುಂಬದವರಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಚಿತ್ರದುರ್ಗದಲ್ಲಿ ಗುರುವಾರ ಪರಿಹಾರದ ಚೆಕ್ ಅನ್ನು ವಿತರಿಸಿದರು.
ಅಪಘಾತದಿಂದ ಮೃತಪಟ್ಟ ಕುಟುಂಬದವರಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಚಿತ್ರದುರ್ಗದಲ್ಲಿ ಗುರುವಾರ ಪರಿಹಾರದ ಚೆಕ್ ಅನ್ನು ವಿತರಿಸಿದರು.   

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಸಮೀಪ ಕೆಲ ದಿನಗಳ ಹಿಂದೆ ಗಣಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ₹ 20 ಲಕ್ಷದಂತೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಪ್ರವಾಸಿ ಮಂದಿರದಲ್ಲಿ ಗುರುವಾರ ಚೆಕ್ ವಿತರಿಸಿದರು.

ಲಾರಿ ಡಿಕ್ಕಿ ಹೊಡೆದು ಭೀಮಸಮುದ್ರ ಲಂಬಾಣಿ ಹಟ್ಟಿಯ ನಿವಾಸಿ ಮಹಾಂತೇಶ್‌, ಪತ್ನಿ ದೀಪಾ, ಸಹೋದರನ ಪುತ್ರ ಚೇತನ್‌ ಮೃತಪಟ್ಟಿದ್ದರು. ಪರಿಹಾರವಾಗಿ ಕುಟುಂಬದವರಿಗೆ ವೇದಾಂತ-ಸೇಸಾ ಗೋವಾ ಕಬ್ಬಿಣ ಅದಿರು ಕಂಪನಿ ₹ 80 ಲಕ್ಷ ನೀಡಲು ಒಪ್ಪಿಗೆ ಸೂಚಿಸಿತ್ತು.

ಅದರಂತೆ ಮೃತಪಟ್ಟ ಮೂವರ ಪರವಾಗಿ ಬಂದಿದ್ದ ಕುಟುಂಬಸ್ಥರಿಗೆ ತಲಾ ₹ 20 ಲಕ್ಷದಂತೆ ಒಟ್ಟು ₹ 60 ಲಕ್ಷ ವಿತರಿಸಲಾಯಿತು. ಮತ್ತೊಬ್ಬರು ಕಾರಣಾಂತರದಿಂದ ಬಂದಿರದ ಕಾರಣ ಅವರಿಗೆ ಸಲ್ಲಬೇಕಾದ ₹ 20 ಲಕ್ಷದ ಚೆಕ್ ಅನ್ನು ಮತ್ತೊಂದು ದಿನ ಗಣಿ ಕಂಪನಿಯವರು ಅಥವಾ ಶಾಸಕರ ಸಮ್ಮುಖದಲ್ಲಿ ವಿತರಿಸಲು ತೀರ್ಮಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.