ADVERTISEMENT

ತೋಟದಲ್ಲಿ ವ್ಯಕ್ತಿ ಶವ: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:40 IST
Last Updated 29 ಅಕ್ಟೋಬರ್ 2020, 4:40 IST
ಮೃತ ಬಸವರಾಜಪ್ಪ ಅವರ ಪತ್ನಿ ಚಂದ್ರಮ್ಮ ಹಾಗೂ ಮಗ ತಿಮ್ಮೇಶ್ ಅವರಿಂದ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕ ಮಾಹಿತಿ ಪಡೆದರು
ಮೃತ ಬಸವರಾಜಪ್ಪ ಅವರ ಪತ್ನಿ ಚಂದ್ರಮ್ಮ ಹಾಗೂ ಮಗ ತಿಮ್ಮೇಶ್ ಅವರಿಂದ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕ ಮಾಹಿತಿ ಪಡೆದರು   

ಚಿಕ್ಕಜಾಜೂರು: ಹನುಮನಕಟ್ಟೆ ಗ್ರಾಮದ ಸಮೀಪ ಶ್ರೀನಿವಾಸ ಎಂಬುವರ ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾಶೀಪುರ ಗ್ರಾಮದ ಬಸಪ್ಪ ಅಲಿಯಾಸ್‌ ಬಸವರಾಜಪ್ಪ (56) ಎಂಬುವರ ಶವ ಬುಧವಾರ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ನೇಣು ಬಿಗಿದ ಗುರುತು ಕಂಡು ಬಂದಿದೆ. ಮೃತರ ಪತ್ನಿ ಚಂದ್ರಮ್ಮ ಹಾಗೂ ಮಗ ತಿಮ್ಮೇಶ್‌ ಅವರಿಂದ ಎಸ್ಪಿ ರಾಧಿಕಾ ಮಾಹಿತಿ ಪಡೆದರು.

ಚಿತ್ರಹಳ್ಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್‌.ಕೆ.ಮಂಜುನಾಥ ಹಾಗೂ ಸಿಬ್ಬಂದಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಹಾಲಿಂಗನಂದ ಗಾಂವಿ, ಡಿವೈಎಸ್ಪಿ ಪಾಂಡುರಂಗ, ಸಿಪಿಐ ಕೆ.ಎನ್‌.ರವೀಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.