ADVERTISEMENT

ಹಿರಿಯೂರು: ತಂದೆಯ ಶವಕ್ಕೆ ಹೆಗಲು ಕೊಟ್ಟ ಮಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:25 IST
Last Updated 22 ಏಪ್ರಿಲ್ 2021, 5:25 IST
ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದಲ್ಲಿ ಬುಧವಾರ ನಿಧನರಾದ ಗುಡಿಗೌಡ ಜೂಲಪ್ಪ ಅವರ ಪುತ್ರಿ ಶಾಂತಮ್ಮ ತಂದೆಯ ಪಾರ್ಥಿವ ಶರೀರ‌ ಸಾಗಿಸಲು ಹೆಗಲು ಕೊಟ್ಟರು
ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದಲ್ಲಿ ಬುಧವಾರ ನಿಧನರಾದ ಗುಡಿಗೌಡ ಜೂಲಪ್ಪ ಅವರ ಪುತ್ರಿ ಶಾಂತಮ್ಮ ತಂದೆಯ ಪಾರ್ಥಿವ ಶರೀರ‌ ಸಾಗಿಸಲು ಹೆಗಲು ಕೊಟ್ಟರು   

ಕಳವಿಭಾಗಿ (ಹಿರಿಯೂರು): ತಾಲ್ಲೂಕಿನ ಕಳವಿಭಾಗಿ ಗ್ರಾಮದ ಹಾಲುಮತ ಕುರುಬರ ಸಮುದಾಯದ ಹಿರಿಯ ಮುಖಂಡ ಹಾಗೂ ಹರ್ತಿಕೋಟೆ ಗ್ರಾಮದ ಓರುಗಲ್ಲಮ್ಮ ದೇಗುಲದ ಗುಡಿಗೌಡ ಎಂ.ಜೂಲಪ್ಪ (86) ಬುಧವಾರ ನಿಧನರಾದರು.

ಅವರ ಅಂತ್ಯಸಂಸ್ಕಾರದ ವೇಳೆ ಮಗಳು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ತಂದೆಯ ಮೇಲಿನ ಪ್ರೀತಿ ತೋರಿದರು.

ಜೂಲಪ್ಪ ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಐವರು ಪುತ್ರಿಯರು ಇದ್ದಾರೆ. ಐವರು ಪುತ್ರಿಯರಲ್ಲಿ ಮಗಳು ಶಾಂತಮ್ಮ ತಂದೆಯ ಮೇಲಿನ ಪ್ರೀತಿಯ ದ್ಯೋತಕವಾಗಿ ಶವ ಸಾಗಿಸಲು ಹೆಗಲು ಕೊಟ್ಟರು.

ADVERTISEMENT

ಬುಧವಾರ ಸಂಜೆ ಗ್ರಾಮದ ಜಮೀನಿನಲ್ಲಿ ಹಾಲುಮತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.