ಚಳ್ಳಕೆರೆ (ಚಿತ್ರದುರ್ಗ): ರಾಹುಲ್ ಗಾಂಧಿ ಪಾದಕ್ಕೂ ಯಡಿಯೂರಪ್ಪ ಸಮಾನ ಅಲ್ಲ ಅಂತ ನಾನು ಹೇಳುವುದಿಲ್ಲ. ಯಡಿಯೂರಪ್ಪ ಅವರಷ್ಟು ಕೀಳು ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
'ಮೋದಿ ಪಾದದ ಧೂಳಿಗೂ ಸಿದ್ದರಾಮಯ್ಯ ಸಮಾನರಲ್ಲ' ಎಂಬ ಯಡಿಯೂರಪ್ಪ ಹೇಳಿಕೆಗೆ ಬುಧವಾರ ಚಳ್ಳಕೆರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
'ಇದು ಕೀಳು ಅಭಿರುಚಿ. ಯಡಿಯೂರಪ್ಪ ಇಷ್ಟು ಕೀಳು ಮಟ್ಟಕ್ಕೆ ಇಳಿದು ಮಾತನಾಡುತ್ತಾರೆ ಅಂದುಕೊಂಡಿರಲಿಲ್ಲ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಇಂತಹ ಹೇಳಿಕೆ ನೀಡಬಾರದು' ಎಂದು ಎಂದು ಹೇಳಿದರು.
'ನೆಹರೂ ಪಾದಕ್ಕೂ ಮೋದಿ ಸಮಾನರಲ್ಲ ಎಂಬುದಾಗಿ ನಾನು ಹೇಳಲಿಕ್ಕೆ ಆಗುತ್ತದಾ? ಮೋದಿ ಅವರು ದೇಶದ ಪ್ರಧಾನಿ. ಯಡಿಯೂರಪ್ಪ ಅವರಷ್ಟು ಕೀಳು ಅಭಿರುಚಿಯ ಹೇಳಿಕೆ ನೀಡುವುದಿಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅರುಳು ಮರುಳು ಇರಬಹುದು' ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.