ಹಿರಿಯೂರು: ಉಕ್ರೇನ್ ದೇಶದ ಲಿವೈ ನಗರದಲ್ಲಿರುವ ಹಾಸ್ಟೆಲ್ನಿಂದ ಮಾರ್ಚ್ 2ರಂದು ಹಂಗರಿ ದೇಶವನ್ನು ತಲುಪಿದ್ದ ತಾಲ್ಲೂಕಿನ ಪಟ್ರೆಹಳ್ಳಿಯ ಮುರುಗೇಶ್–ರುಕ್ಮಿಣಿ ದಂಪತಿ ಪುತ್ರ ಎಂ. ವಿಷ್ಣು ಶನಿವಾರ ಸಂಜೆ 6.30ಕ್ಕೆ ಬುಡಾಪಿಸ್ಟ್ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಈ ಬಗ್ಗೆ ವಿಷ್ಣು ಅವರ ತಂದೆ ಮುರುಗೇಶ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
‘ಶನಿವಾರ ಸಂಜೆ 5.30ಕ್ಕೆ ದೂರವಾಣಿ ಕರೆ ಮಾಡಿದ್ದ ವಿಷ್ಣು, ವಿಮಾನ ಟಿಕೆಟ್ ಬುಕ್ ಆಗಿದೆ. ರಾತ್ರಿ 2 ಗಂಟೆಯ ವೇಳೆಗೆ ವಿಮಾನ ದೆಹಲಿ ತಲುಪಲಿದೆ. ಭಾನುವಾರ ಸಂಜೆಯ ಒಳಗೆ ಬೆಂಗಳೂರಿಗೆ ಬರುವುದಾಗಿ ತಿಳಿಸಿದ. ನಮಗೆ ನಂಬಿಕೆ ಬರಲಿ ಎಂದು ವಿಮಾನದ ಟಿಕೆಟ್ ಅನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ್ದಾನೆ. ಹತ್ತು ದಿನಗಳ ನರಕ ಯಾತನೆಗೆ ಸ್ವಲ್ಪಮಟ್ಟಿನ ಮುಕ್ತಿ ದೊರೆತಿದೆ. ಭಾನುವಾರ ಸಂಜೆ ಆಗುವುದನ್ನು ಕಾತುರದಿಂದ ನೋಡುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.