ADVERTISEMENT

ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 4:07 IST
Last Updated 3 ಜನವರಿ 2021, 4:07 IST
ಹಿರಿಯೂರಿನ ನೆಹರೂ ಮೈದಾನದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾ‍ಪಟುಗಳನ್ನು ಹಿರಿಯ ಕ್ರೀಡಾಪಟು ಶಿವಶಂಕರ ಮಠದ್ ಅಭಿನಂದಿಸಿದರು.
ಹಿರಿಯೂರಿನ ನೆಹರೂ ಮೈದಾನದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರೀಡಾ‍ಪಟುಗಳನ್ನು ಹಿರಿಯ ಕ್ರೀಡಾಪಟು ಶಿವಶಂಕರ ಮಠದ್ ಅಭಿನಂದಿಸಿದರು.   

ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಶನಿವಾರ ಟೌನ್ ಫುಟ್‌ಬಾಲ್ ಕ್ಲಬ್ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಆಹ್ವಾನಿತ ಫುಟ್‌ಬಾಲ್ ಪಂದ್ಯಾವಳಿಗೆ ನಗರಸಭೆ ಮಾಜಿ ಸದಸ್ಯ ಶಿವು ಯಾದವ್ ಚಾಲನೆ ನೀಡಿದರು.

ಹಿರಿಯ ಕ್ರೀಡಾಪಟು ಶಿವಶಂಕರ ಮಠದ್, ‘ತಾಲ್ಲೂಕಿನಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿದ್ದಾರೆ. ತಾಲ್ಲೂಕು ಕ್ರೀಡಾಂಗಣವಿದ್ದರೂ ಅಗತ್ಯ ಸೌಕರ್ಯಗಳಿಲ್ಲ. ತರಬೇತುದಾರರಿಲ್ಲ. ತಳ್ಳುಗಾಡಿಗಳವರು ತಿಂಡಿ–ತಿನಿಸು ಮಾರುವ ತಾಣವಾಗಿರುವ ಹಳೆಯ ನೆಹರೂ ಕ್ರೀಡಾಂಗಣಕ್ಕೆ ಕಾಂಪೌಂಡ್ ನಿರ್ಮಿಸುವ ಬಗ್ಗೆ ಶಾಸಕರು ಚಿಂತನೆ ಮಾಡಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಪಲ್ಲವ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಅಕ್ರಂ, ಸಂಘಟಕ ಅಲೆಕ್ಸ್, ಉಪನ್ಯಾಸಕ ಪ್ರಭು, ನಜೀರ್, ಅರುಣ್, ಎಬಿನೇಜರ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.