ಚಳ್ಳಕೆರೆ: ಶಾಂತಿನಗರ, ರಹೀಂನಗರ, ವಾಲ್ಮೀಕಿನಗರ, ಗಾಂಧಿನಗರ ಮುಂತಾದ ಬಡಾವಣೆಯಲ್ಲಿ ದುಃಸ್ಥಿತಿಯಲ್ಲಿದ್ದರಾಜಕಾಲುವೆಗಳ ಸ್ವಚ್ಛತಾ ಕಾರ್ಯಕ್ಕೆ ನಗರಸಭೆ ಶುಕ್ರವಾರ ಚಾಲನೆ ನೀಡಿತು.
ಜಾಲಿ ಮಳ್ಳಿನ ಗಿಡಗಳನ್ನು ಕಡಿದು ಹಾಕಿಸಿ ಕಾಲುವೆಯಲ್ಲಿ 3-4 ಅಡಿ ತುಂಬಿಕೊಂಡಿದ್ದ ಹೂಳನ್ನು ಜೆಸಿಬಿ ಯಂತ್ರದ ಮೂಲಕ ತೆಗೆದು ಹಾಕಿಸಲಾಯಿತು.
ಮಳೆನೀರು ಮನೆಗೆ ನುಗ್ಗುವುದನ್ನು ತಡೆಯುವ ಸಲುವಾಗಿ ಕಾಲುವೆಯ ಕೊರಕಲು ಪ್ರದೇಶಕ್ಕೆ ಟ್ರ್ಯಾಕ್ಟರ್ ಮೂಲಕ ಹೊಸ ಮಣ್ಣು ಹಾಕಿಸಿ ಕಾಲುವೆ ಭದ್ರಪಡಿಸಿದರು.
ರಾಜಕಾಲುವೆಗಳ ಸ್ವಚ್ಛತೆ ಕುರಿತು‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ವಿಶೇಷ ವರದಿಪ್ರಕಟವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.