ADVERTISEMENT

ಮೊಳಕಾಲ್ಮುರು: ‘ಬಸವ ಸೇವಾರತ್ನ ಪ್ರಶಸ್ತಿʼಗೆ ಸೋಮೇಶ್ವರ ಸ್ವಾಮೀಜಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 6:37 IST
Last Updated 13 ಜುಲೈ 2025, 6:37 IST
ಸೋಮೇಶ್ವರ ಸ್ವಾಮೀಜಿ 
ಸೋಮೇಶ್ವರ ಸ್ವಾಮೀಜಿ    

ಮೊಳಕಾಲ್ಮುರು: ತಾಲ್ಲೂಕಿನ ಐಸಿಹಾಸಿಕ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿ ಅವರನ್ನು ಜೀವಮಾನ ಸಾಧನೆಗಾಗಿ ಬಸವ ಸೇವಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಎಚ್‌ಎಎಲ್‌ ಬಸವ ಸೇವಾ ಸಮಿತಿಯ 41ನೇ ವಾರ್ಷಿಕೋತ್ಸವದ ಅಂಗವಾಗಿ ಈ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಹಾಗೂ ಕುಗ್ರಾಮದಲ್ಲಿ ಇದ್ದುಕೊಂಡು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಮಾದರಿ ಗೋಶಾಲೆ ನಿರ್ವಹಣೆ ಮೂಲಕ ಗಮನ ಸೆಳೆದಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜುಲೈ 20ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮೀಜಿ, ಲೋಕಾಯಕ್ತ ಬಿ.ಎಸ್.‌ ಪಾಟೀಲ್‌, ಎಚ್‌ಎಎಲ್‌ ಬಸವ ಸಮಿತಿ ಅಧ್ಯಕ್ಷ ಒ. ಬೇಲೂರಪ್ಪ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.