ಹಿರಿಯೂರು: ನಗರದ ಕಾದಂಬರಿಕಾರ ಡಿ.ಸಿ.ಪಾಣಿ ಅವರ ದೇಹಕ್ಕೆ ಬುಧವಾರ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಅಂತಿಮ ಹಂತದ ಕೋವಿಡ್–19 ಪ್ರಾಯೋಗಿಕ ಲಸಿಕೆಯನ್ನು ಸೇರಿಸಲಾಯಿತು.
‘ಪ್ರಜಾವಾಣಿ’ ಜತೆ ಮಾತನಾಡಿದ ಪಾಣಿ, ‘ಡಾ.ಪರಿತೋಷ್ ವಿ.ದೇಸಾಯ್ ಅವರು ವಿಶೇಷ ಫಾರ್ಮಾಜೆಟ್ ಮಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ದೇಹದೊಳಗೆ ಸೇರಿಸಿದ್ದಾರೆ. 2020ರ ಆ. 16 ಮತ್ತು ಸೆ. 29ರಂದು ಒಂದು ಮತ್ತು ಎರಡನೇ ಪ್ರಯೋಗ ಮಾಡಿದ್ದರು. ಇದೊಂದು ಅವಿಸ್ಮರಣೀಯ ಘಟನೆ’ ಎಂದರು.
‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶನದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಯ ಪ್ರಯೋಗಕ್ಕೆ ಸ್ವಯಂ ಪ್ರೇರಣೆಯಿಂದ ಒಪ್ಪಿಗೆ ನೀಡಿದ್ದೆ. ಅತ್ಯಂತ ಪರಿಣಾಮಕಾರಿ ಲಸಿಕೆ ದೇಶದಲ್ಲೇ ಉತ್ಪಾದನೆ ಆಗಲಿದ್ದು, ಜನರನ್ನು ಭೀತಗೊಳಿಸಿರುವ ಕೋವಿಡ್–19 ಕಾಯಿಲೆ ಬಹುಬೇಗ ಅಂತ್ಯ ಕಾಣಲಿದೆ’ ಎಂದು ಪಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.