ADVERTISEMENT

ಯುವಶಕ್ತಿಯಿಂದ ಸಾಮಾಜಿಕ ಮೌಲ್ಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 4:30 IST
Last Updated 13 ಅಕ್ಟೋಬರ್ 2011, 4:30 IST

ಕೊಯಿಲ(ಉಪ್ಪಿನಂಗಡಿ): ಜ್ಞಾನಾರ್ಜನೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಯುವಶಕ್ತಿ ಕೈಗೊಳ್ಳಬೇಕು ಎಂದು ಕೊಯಿಲ ಪಶುಸಂಗೋಪಾಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ. ಎ.ಎಸ್. ತಿರುಮಲೇಶ್ವ ಭಟ್ ಹೇಳಿದರು.

ಕೊಯಿಲ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೊಯಿಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮನಾಥ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಅಶೋಕ್ ಹಲ್ಯಾರ, ಪ್ರಾಚಾರ್ಯ ಎಂ. ಸತೀಶ್ ಭಟ್, ಗಣರಾಜ ಕುಂಬ್ಳೆ, ಕೊಯಿಲ ಗ್ರಾ.ಪಂ ಸದಸ್ಯ ನೀರಜ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಕಮಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.