ADVERTISEMENT

‘ದೈವಾರಾಧನೆ ಸೌಹಾರ್ದತೆ ಪ್ರತೀಕ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2014, 7:00 IST
Last Updated 21 ಫೆಬ್ರುವರಿ 2014, 7:00 IST
ಬಂಟ್ವಾಳ ತಾಲ್ಲೂಕಿನ ಕೊಯಿಲ ಬೊಬ್ಬರ್ಯ ದೈವಸ್ಥಾನದಲ್ಲಿ ಗುರುವಾರ ನಡೆದ ದೈವಗಳ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿದರು.
ಬಂಟ್ವಾಳ ತಾಲ್ಲೂಕಿನ ಕೊಯಿಲ ಬೊಬ್ಬರ್ಯ ದೈವಸ್ಥಾನದಲ್ಲಿ ಗುರುವಾರ ನಡೆದ ದೈವಗಳ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿದರು.   

ಬಂಟ್ವಾಳ: ಕರಾವಳಿಯಲ್ಲಿ ನಾಗಾರಾಧನೆ ಮತ್ತು ದೈವಾರಾದನೆ ವೈಶಿಷ್ಟ್ಯತೆ ಜೊತೆಗೆ ದೈವಾ­ರಾಧನೆ­ಯಲ್ಲಿ ಪರಸ್ಪರ ಸೌಹಾರ್ದತೆ ಬಿಂಬಿಸುವ ತುಳು­ನಾಡಿನ ಪರಂಪರೆ ಅಡಗಿದೆ ಎಂದು ನಿವೃತ್ತ ಪ್ರಾಂಶು­ಪಾಲ ಅರಳ ಗರುಡ ಮಹಾಕಾಳಿ ದೇವಳದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಹೇಳಿದ್ದಾರೆ.

ತಾಲ್ಲೂಕಿನ ಕೊಯಿಲ ಬೊಬ್ಬರ್ಯ ದೈವಸ್ಥಾನ­ದಲ್ಲಿ ಗುರುವಾರ ದೈವಗಳ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡಿದರು. ರಾಜ್ಯ ಬಿ.ಜೆ.ಪಿ. ಉಪಾ­ಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್,  ಜಿ.ಪಂ.ಸದಸ್ಯೆ ನಳಿನಿ ಬಿ. ಶೆಟ್ಟಿ, ಪಂಜಿಕಲ್ಲು ಬಾಲೇಶ್ವರ ಬ್ರಹ್ಮ­ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಕಾರ್ಯಾ­ಧ್ಯಕ್ಷ ಪ್ರಕಾಶ­ಕುಮಾರ್ ಜೈನ್ ಪೀರ್ದಬೆಟ್ಟುಗುತ್ತು, ರಾಯಿ ಗ್ರಾ.ಪಂ.ಸದಸ್ಯ ಡೊಂಬಯ ಬಿ.ಅರಳ, ರಾಯಿ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ವೇದಾನಂದ ಕಾರಂತ್,

ಉದ್ಯಮಿಗಳಾದ ಜಿತೇಂದ್ರ ಎಸ್.­ಕೊಟ್ಟಾರಿ, ದಿನೇಶ್ ಕುಮಾರ್ ಕಾಯರ್‍ಮಾರ್, ಬಿ.ಮಂಜುನಾಥ ಪೈ , ಮಧುಕರ ಬಂಗೇರ ರಾಯಿ, ಲೋಕೇಶ ಪೆದಮಲೆ, ವಕೀಲ ಸುರೇಶ್ ಶೆಟ್ಟಿ ಸಿದ್ಧಕಟ್ಟೆ, ಡಾ. ಸುದೀಪ್ ಜೈನ್ ಸಿದ್ಧಕಟ್ಟೆ, ಜೀರ್ಣೋ­ದ್ಧಾರ ಸಮಿತಿ ಗೌರವಾಧ್ಯಕ್ಷ  ಎಂ.ದುರ್ಗಾ­ದಾಸ್ ಶೆಟ್ಟಿ , ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಂತ ಪಿಲ್ಕಾಜೆ, ಅನಂತರಾವ್ ಕೊಯಿಲಗುತ್ತು  ಮತ್ತಿತರರು ಮತ್ತಿತರರು ಶುಭ ಹಾರೈಸಿದರು.

ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಹರ್ಷೇಂದ್ರ ಹೆಗ್ಡೆ ಅಂತರ ಪ್ರಾಸ್ತಾವಿಕ ಮಾತನಾ­ಡಿದರು.

ಸಮಿತಿ ಉಪಾಧ್ಯಕ್ಷ ಮೋಹನ್ ಕೈತ್ರೋಡಿ ವಂದಿಸಿದರು. ಸಂತೋಷ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.