ಬೆಳ್ತಂಗಡಿ: ಮರ ಕತ್ತರಿಸುತ್ತಿದ್ದ ವೇಳೆ ಗರಗಸ ಕುತ್ತಿಗೆಗೆ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಸಾವ್ಯದಲ್ಲಿ ನಡೆದಿದೆ. ಸಾವ್ಯ ಗ್ರಾಮದ ನಿವಾಸಿ ಪ್ರಶಾಂತ ಪೂಜಾರಿ (36) ಮೃತರು.
ಮರ ಕತ್ತರಿಸುತ್ತಿದ್ದಾಗ ಪ್ರಶಾಂತ್ ಆಯತಪ್ಪಿ ಕೆಳಗೆ ಬಿದ್ದರು. ಯಂತ್ರವು ಅವರ ಕೈಯಿಂದ ಜಾರಿ ಕುತ್ತಿಗೆ ಭಾಗಕ್ಕೆ ತುಗುಲಿತು. ಯಂತ್ರ ಚಾಲನೆಯಲ್ಲಿದ್ದ ಕಾರಣ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಮೃತರ ಸಹೋದರ ಪ್ರಮೋದ್ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.