ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಹಾಗೂ ಎನ್.ಸಿ.ಸಿ. ಆರ್ಮಿ ವಿಂಗ್, 18 ಕರ್ನಾಟಕ ಬೆಟಾಲಿಯನ್ ಕೆಡೆಟ್ ಸಿಪಿಎಲ್ ಆಕಾಂಕ್ಷಾ ಶೆಣೈ ಕೆಡೆಟ್ ವೆಲ್ಫೇರ್ ಸೊಸೈಟಿಯ ರಾಜ್ಯಮಟ್ಟದ ಅತ್ಯುತ್ತಮ ಎನ್.ಸಿ.ಸಿ. ಕೆಡೆಟ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಕೆಡೆಟ್ ವೆಲ್ಫೇರ್ ಸೊಸೈಟಿ ನಡೆಸಿದ ಬೆಸ್ಟ್ ಎನ್.ಸಿ.ಸಿ. ಕೆಡೆಟ್ ಸ್ಪರ್ಧೆಗಳಲ್ಲಿ ಆಕಾಂಕ್ಷಾ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು ಹಾಗೂ ಡ್ರಿಲ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಇಂಟರ್ವ್ಯೂಗಳಲ್ಲಿ ಗೆದ್ದಿದ್ದರು. ಆಕಾಂಕ್ಷಾ ಸಾಧನೆಗೆ 18 ಕರ್ನಾಟಕ ಬೆಟಾಲಿಯನ್ನ ಕರ್ನಲ್ ನಿತಿನ್ ಆರ್. ಭಿಡೆ, ಲೆಫ್ಟಿನಂಟ್ ಕರ್ನಲ್ ಅಮಿತಾಭ್ ಸಿಂಗ್, ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಹಾಗೂ ಕಾಲೇಜಿನ ಆರ್ಮಿ ವಿಂಗ್ನ ಆಫೀಸರ್ ಕ್ಯಾಪ್ಟನ್ ಶಕಿನ್ರಾಜ್ ಮಾರ್ಗದರ್ಶನ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.