ADVERTISEMENT

ಸುಬ್ರಹ್ಮಣ್ಯ: ಅಯ್ಯಪ್ಪಸ್ವಾಮಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 4:00 IST
Last Updated 1 ಜನವರಿ 2024, 4:00 IST
ಸುಬ್ರಹ್ಮಣ್ಯದಲ್ಲಿ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮೆರವಣಿಗೆ ನಡೆಯಿತು
ಸುಬ್ರಹ್ಮಣ್ಯದಲ್ಲಿ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮೆರವಣಿಗೆ ನಡೆಯಿತು   

ಸುಬ್ರಹ್ಮಣ್ಯ: ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಆಶ್ರಯದಲ್ಲಿ ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ 15ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಜರುಗಿತು.

ಪ್ರಧಾನ ಗುರುಸ್ವಾಮಿ ಉಮೇಶ್ ಕೆ.ಎನ್., ದಾಮೋದರ ಗುರುಸ್ವಾಮಿ, ಶಿವರಾಮ ಗುರುಸ್ವಾಮಿ, ದೀಪೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಸ್ವಾಮಿ ಭಕ್ತರಿಗೆ ಪ್ರಸಾದ ವಿತರಿಸಿದರು. ಭಕ್ತರು ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಮಧ್ಯಾಹ್ನ ಅನ್ನದಾನ ಸೇವೆ ನೆರವೇರಿತು. ಸಂಜೆ ಚಾರ್ವಕ ಕಪಿಲೇಶ್ವರ ಸಿಂಗಾರಿ ಮೇಳ ಸದಸ್ಯರಿಂದ ಸಿಂಗಾರಿ ಮೇಳ ನಡೆಯಿತು.

ADVERTISEMENT

ಮರಕತ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಬಳಿಕ ದೀಪೋತ್ಸವ ಮೆರವಣಿಗೆ ನಡೆಯಿತು.

ಕಲಾವಿದ ಗಿರೀಶ್ ಆಚಾರ್ಯ ಪೈಲಾಜೆ, ಗುರುಸ್ವಾಮಿ ಗಿರೀಶ್ ಆಚಾರ್ಯ ಕುಲ್ಕುಂದ ಅವರ ನೇತೃತ್ವದಲ್ಲಿ ಬಸವೇಶ್ವರ ಕುಣಿತ ಭಜನಾ ತಂಡದಿಂದ ಭಜನೆ ನಡೆಯಿತು.

ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಉತ್ಸವ ಸಮಿತಿ ಸಂಚಾಲಕ ದೀಪಕ್ ನಂಬಿಯಾರ್ ದೀಪೋತ್ಸವ ಸಮಿತಿ ಕಾರ್ಯದರ್ಶಿ ಮನೋಜ್ ಕೈಕಂಬ, ಪ್ರಸನ್ನ ನೂಚಿಲ, ಕೋಶಾಧಿಕಾರಿ ಜಯಪ್ರಕಾಶ್ ಆರ್., ಜತೆ ಕಾರ್ಯದರ್ಶಿ ಪ್ರೀತೇಶ್ ಎಡೋಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.