ADVERTISEMENT

ಮೊಗೇರ ಚಾವಡಿ: ಹೊರೆ ಕಾಣಿಕೆ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2024, 5:57 IST
Last Updated 2 ಮೇ 2024, 5:57 IST
ಬದಿಯಡ್ಕ ಸಮೀಪದ ಕನ್ನೆಪ್ಪಾಡಿಯ ಮೊಗೇರ ಚಾವಡಿಯ ಪ್ರತಿಪ್ಠಾ ಮಹೋತ್ಸವ ಬುಧವಾರ ಆರಂಭವಾಯಿತು
ಬದಿಯಡ್ಕ ಸಮೀಪದ ಕನ್ನೆಪ್ಪಾಡಿಯ ಮೊಗೇರ ಚಾವಡಿಯ ಪ್ರತಿಪ್ಠಾ ಮಹೋತ್ಸವ ಬುಧವಾರ ಆರಂಭವಾಯಿತು   

ಬದಿಯಡ್ಕ: ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬುಧವಾರ ಸಂಜೆ ನಡೆಯಿತು. ನೀರ್ಚಾಲು ಕುಮಾರ ಸ್ವಾಮಿ ಭಜನಾ ಮಂದಿರದ ಪರಿಸರದಿಂದ ಹೊರಟ ಮೆರವಣಿಗೆಗೆ ಅರ್ಚಕ ಸುಬ್ರಹ್ಮಣ್ಯ ಆಚಾರ್ಯ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಚಾವಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ, ಹೊರೆ ಕಾಣಿಕೆ ಸಮಿತಿಯ ಬಾಲಕೃಷ್ಣ ನಾಯ್ಕ್ ನೀರ್ಚಾಲು, ಶಂಕರ ಮಾಡತ್ತಡ್ಕ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ರಾಮ ಪಟ್ಟಾಜೆ, ಕೃಷ್ಣ ದರ್ಬೆತ್ತಡ್ಕ, ಸುಂದರ ಬಾರಡ್ಕ, ಉದಯ ಕುಮಾರ್ ಎಂ, ಕೆ. ಕೆ. ಸ್ವಾಮಿಕೃಪಾ, ಕಿಶೋರ್ ಕುಮಾರ್, ಗಣೇಶ್ ಚೋಯಿಮೂಲೆ, ಸತೀಶ ಅಣೆಬೈಲು ಪಾಲ್ಗೊಂಡಿದ್ದರು.

ಸುಬ್ರಹ್ಮಣ್ಯ ಖಂಡಿಗೆ ಉಗ್ರಾಣ ಮುಹೂರ್ತ ನೆರವೇರಿಸಿದರು. ಸಿ.ಐ ಬಾಲಕೃಷ್ಣ ಸೂರಂಬೈಲು, ಶಂಕರ ಸ್ವಾಮಿಕೃಪಾ ಇದ್ದರು. ಈ ಸಂದರ್ಭದಲ್ಲಿ ವಿವಿಧ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ಕ್ಷೇತ್ರದ ತಂತ್ರಿವರ್ಯ ಮಹೇಶ್ ಶಾಂತಿ ಹೆಜಮಾಡಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.