ADVERTISEMENT

ಬ್ಯಾಂಕುಗಳು ಪರಿಹಾರ ಯೋಜನೆಗಳ ಜಾಗೃತಿ ನೇತೃತ್ವ ವಹಿಸಿ: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 18 ಮೇ 2020, 9:04 IST
Last Updated 18 ಮೇ 2020, 9:04 IST
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್   

ಮಂಗಳೂರು:ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿವಿಧ ವರ್ಗಗಳಿಗೆ ಪ್ರತ್ಯೇಕ ಯೋಜನೆಗಳ ಮೂಲಕ ಪರಿಹಾರಗಳನ್ನು (ಪ್ಯಾಕೇಜ್) ಘೋಷಿಸಿದ್ದು, ಒಂದೊಂದು ಯೋಜನೆಯ ನೇತೃತ್ವವನ್ನು ಒಂದೊಂದು ಬ್ಯಾಂಕ್‌‌ಗಳು ವಹಿಸಿಕೊಂಡು ಪ್ರಚಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸೋಮವಾರ ಬ್ಯಾಂಕ್ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆ ಮೂಲಕ ಯೋಜನೆಗಳು ಅರ್ಹರಿಗೆ ತಲುಪುವಂತೆ ಮಾಡಬೇಕು ಎಂದುಸಲಹೆ ನೀಡಿದರು.

ಸರ್ಕಾರದ ಆದ್ಯತಾ ವಲಯದ ಪ್ರಗತಿ ಮಾಹಿತಿ ನೀಡದ ಹಾಗೂ ಸಭೆಗೆ ಹಾಜರಾಗದ ಬ್ಯಾಂಕ್‌ಗಳಲ್ಲಿರುವ ಸರ್ಕಾರದ ಮುಂಗಡ ಹಾಗೂ ಖಾತೆಗಳನ್ನು ಹಿಂಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.