ADVERTISEMENT

ಬೆಳ್ತಂಗಡಿ ತಾಲ್ಲೂಕು ಚಿತ್ಪಾವನ ಬ್ರಾಹ್ಮಣರ ಸಂಘಕ್ಕೆ ತ್ರಿವಿಕ್ರಮ ಕೇಳ್ಕರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 13:55 IST
Last Updated 1 ಆಗಸ್ಟ್ 2022, 13:55 IST
ತ್ರಿವಿಕ್ರಮ ಕೇಳ್ಕರ್
ತ್ರಿವಿಕ್ರಮ ಕೇಳ್ಕರ್   

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕು ಚಿತ್ಪಾವನ ಬ್ರಾಹ್ಮಣರ ಸಂಘ ರಚನೆಯಾಗಿದ್ದು, ಅಧ್ಯಕ್ಷರಾಗಿ ಬ್ಯಾಂಕ್ ನಿವೃತ್ತ ಉದ್ಯೋಗಿ ತ್ರಿವಿಕ್ರಮ ಕೇಳ್ಕರ್ ಬೆಳ್ತಂಗಡಿ ಆಯ್ಕೆಯಾಗಿದ್ದಾರೆ.

ಉಜಿರೆಯಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಕಾರ್ಯಕಾರಿ ಸಮಿತಿಯನ್ನು ಈಚೆಗೆ ರಚಿಸಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಮುಂಡಾಜೆ ಸಿ.ಎ.ಬ್ಯಾಂಕಿನ‌ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ಖಜಾಂಜಿಯಾಗಿ ಮುಂಡಾಜೆ ಚಿತ್ಪಾವನ ಸಂಘಟನೆಯ ಅಧ್ಯಕ್ಷ ವಾಸುದೇವ ಗೋಖಲೆ ಮುಂಡಾಜೆ ಅವರನ್ನು ಆಯ್ಕೆ ಮಾಡಲಾಯಿತು.

ADVERTISEMENT

ಉಪಾಧ್ಯಕ್ಷರಾಗಿ ಪರೋಹಿತ ವರದಶಂಕರ ದಾಮಲೆ ನೇತ್ರಾಳ, ದಂತವೈದ್ಯ ಡಾ.ಶಶಿಧರ ಡೋಂಗ್ರೆ, ಸೇಣೆರೆ ಬೈಲು ಸೂಳಬೆಟ್ಟು, ಜತೆಕಾರ್ಯದರ್ಶಿಯಾಗಿ ಉದ್ಯಮಿ ರಶ್ಮಿ ಪಟವರ್ಧನ್ ಬೆಳ್ತಂಗಡಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಗೆ ನಿವೃತ್ತ ಅಧ್ಯಾಪಕ ಗೋವಿಂದ ದಾಮ್ಲೆ ಉಜಿರೆ, ಉಷಾ ಎಸ್. ಮೆಹೆಂದಳೆ ಕಾಪಿನಡ್ಕ, ನರಸಿಂಹ ಪಾಳಂದೆ ದರ್ಭೆತಡ್ಕ, ರವಿಕಲಾ ತಾಮ್ಹನ್‌ಕಾರ್ ದರ್ಬೆತಡ್ಕ, ಪ್ರಹ್ಲಾದ ಫಡಕೆ ಮುಂಡಾಜೆ, ವೇಣುಗೋಪಾಲ ಗೋಖಲೆ ಶಿಶಿಲ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಚಂದ್ರಕಾಂತ ಗೋರೆ ಕುದ್ಯಾಡಿ, ವಿವೇಕ ಕೇಳ್ಕರ್ ಕಾಜಿಮುಗೇರು, ಭಾರ್ಗವ ಮರಾಠೆ ಫಂಡಿಂಜೆ ಅವರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.