ADVERTISEMENT

ಪುತ್ತೂರು | ಕೇಂದ್ರ ಗುಪ್ತಚರ ಇಲಾಖೆಗೆ ನಿವೇಶನ ಮಂಜೂರು

ಅಧಿಕಾರಿಗಳಿಗೆ ಪಹಣಿ ಪತ್ರ ಹಸ್ತಾಂತರಿಸಿದ ಶಾಸಕ ಅಶೋಕ್ ರೈ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:09 IST
Last Updated 27 ಫೆಬ್ರುವರಿ 2026, 8:09 IST
ಪುತ್ತೂರು ಶಾಸಕ ಅಶೋಕ್ ರೈ ಅವರು ಕೇಂದ್ರ ಗುಪ್ತಚರ ಇಲಾಖೆಯ ಕಟ್ಟಡಕ್ಕೆ ಮಂಜೂರುಗೊಳಿಸಿದ ನಿವೇಶನದ ಪಹಣಿ ಪತ್ರವನ್ನು ಅಧಿಕಾರಿಗೆ ಹಸ್ತಾಂತರಿಸಿದರು. ತಹಶಿಲ್ದಾರ್ ಎಸ್.ಬಿ.ಕೂಡಲಗಿ ಇದ್ದರು
ಪುತ್ತೂರು ಶಾಸಕ ಅಶೋಕ್ ರೈ ಅವರು ಕೇಂದ್ರ ಗುಪ್ತಚರ ಇಲಾಖೆಯ ಕಟ್ಟಡಕ್ಕೆ ಮಂಜೂರುಗೊಳಿಸಿದ ನಿವೇಶನದ ಪಹಣಿ ಪತ್ರವನ್ನು ಅಧಿಕಾರಿಗೆ ಹಸ್ತಾಂತರಿಸಿದರು. ತಹಶಿಲ್ದಾರ್ ಎಸ್.ಬಿ.ಕೂಡಲಗಿ ಇದ್ದರು   

ಪುತ್ತೂರು: ಕೇಂದ್ರ ಸರ್ಕಾರದ ಅಧೀನದ ಕೇಂದ್ರ ಗುಪ್ತಚರ ಇಲಾಖೆಗೆ ಕಚೇರಿ ಆರಂಭಕ್ಕೆ ಪುತ್ತೂರಿನಲ್ಲಿ ನಿವೇಶನ ಮಂಜೂರು ಮಾಡಲಾಗಿದ್ದು, ಒಂದು ವರ್ಷದೊಳಗೆ ಕಚೇರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಕಚೇರಿ ಆರಂಭಕ್ಕೆ ನಿವೇಶನ ಮಂಜೂರು ಮಾಡುವಂತೆ ಎರಡು ತಿಂಗಳ ಹಿಂದೆ ಗುಪ್ತಚರ ಇಲಾಖೆ ಎಸ್‌ಪಿ ಮನವಿ ಮಾಡಿದ್ದರು. ಪುತ್ತೂರು ನಗರದ ಹೊರವಲಯದ ಪಡ್ನೂರಿನಲ್ಲಿ 0.44 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯೇ ಕಚೇರಿ ನಿರ್ಮಾಣ ಕಾಮಗಾರಿ ನಡೆಸಲಿದೆ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT