ADVERTISEMENT

ಸಂಸದ ಕಚೇರಿಯಲ್ಲಿ ಕೊರೊನಾ ಸಹಾಯವಾಣಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:08 IST
Last Updated 20 ಏಪ್ರಿಲ್ 2021, 3:08 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಂಸದರಾಗಿರುವ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಕಚೇರಿಯಲ್ಲಿ ‘ಕೊರೊನಾ ಸಹಾಯವಾಣಿ ಕೇಂದ್ರ’ ತೆರೆಯಲಾಗಿದೆ.

ನಳಿನ್‌ಕುಮಾರ್ ಅವರು ತಮ್ಮ ಕಚೇರಿಯನ್ನು ಸಹಾಯವಾಣಿ ಕೇಂದ್ರವನ್ನಾಗಿ ಘೋಷಿಸಿದ್ದಾರೆ. ಈ ಸಂಬಂಧ ಪ್ರಮುಖರ ಸಭೆ ಕರೆದ ಅವರು, ಕೇಂದ್ರ ನಿರ್ವಹಣೆಗೆ ಸಮಿತಿಯನ್ನು ರಚಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಜನರು ಈ ಸಮಿತಿ ಪ್ರಮುಖರನ್ನು ಸಂಪರ್ಕಿಸಬಹುದು. ಸಮಿತಿ ಮೇಲ್ವಿಚಾರಕರಾಗಿ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ ತಿಳಿಸಿದ್ದಾರೆ.

ಕೊರೊನಾ ಸಹಾಯವಾಣಿ ಕೇಂದ್ರದ ಸಂಪರ್ಕ ಸಂಖ್ಯೆ: 0824 2448888 / 0824 2950445, ಮೊಬೈಲ್–9483496726 / 8762632174, ನಿತಿನ್ ಕುಮಾರ್ (9448467540), ಸುಧೀರ್ ಶೆಟ್ಟಿ ಕಣ್ಣೂರು (9844022213), ಆಸ್ಪತ್ರೆಗಳ ಮಾಹಿತಿಗಾಗಿ –ಕದ್ರಿ ಮನೋಹರ್ ಶೆಟ್ಟಿ (7892871122), ಸುಜನ್ ದಾಸ್ ಕುಡುಪು (9902695471), ಡಾ.ಅಣ್ಣಯ್ಯ ಕುಲಾಲ್ (9448012028), ಡಾ.ಜಿ.ಕೆ.ಭಟ್ (9448475196), ಆಂಬುಲೆನ್ಸ್ ಮಾಹಿತಿಗಾಗಿ– ಭರತ್ (8197804176), ಶೈಲೇಶ್ (9916204219), ಲಸಿಕೆ ಮಾಹಿತಿಗಾಗಿ– ದಿವಾಕರ್ ಪಾಂಡೇಶ್ವರ (9845182462), ಜಗದೀಶ್ ಶೆಟ್ಟಿ (9844095369), ಸಂದೀಪ್ ಗರೋಡಿ (7353632469) ವೆಂಟಿಲೇಟರ್‌ ಮಾಹಿತಿಗಾಗಿ–ಸಂಜಯ್ ಪ್ರಭು (9845072564), ಸತೀಶ್ ಕುಂಪಲ (9341205203), ಜಿತೇಂದ್ರ ಕೊಟ್ಟಾರಿ (9620432499), ಔಷಧಗಳ ಮಾಹಿತಿಗಾಗಿ– ಭಾಸ್ಕರಚಂದ್ರ ಶೆಟ್ಟಿ (7795700999), ಜಮಾಲ್ (9880310618), ಆಯುಷ್ಮಾನ್ ಭಾರತ್ ಕಾರ್ಡ್ ಮಾಹಿತಿಗೆ – ಸಂಜಯ್ ಪ್ರಭು (9845072564), ರಾಧಾಕೃಷ್ಣ
(9845054799), ಅಂತ್ಯಸಂಸ್ಕಾರ ಸೇವೆಗೆ– ಗಣೇಶ್ ಕುಲಾಲ್ (9844423697), ರಘು ಸಾಲ್ಯಾನ್
(9845007074) ಅವರನ್ನು ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.